Tuesday, June 15, 2010

ಇಷ್ಟಗಳನ್ನೆಲ್ಲ ಕಷ್ಟವಾಗಿಸಿದ ಈ ಎರಡು ವರ್ಷ....



2008 ರ ಮುಂಗಾರು ಮಳೆಯ ಜಿಟಿ-ಜಿಟಿ ಹನಿಗಳು ಆಗಷ್ಟೆ ಧಾರವಾಡಕ್ಕೆ ಬಂದಿತ್ತು. ಇದೇ ವಿಶ್ವವಿದ್ಯಾಲಯವೇ ಬೇಕೆಂಬ ಹಟದಿಂದ ನಾನು ಪ್ರವೇಶ ಪತ್ರದೊಂದಿಗೆ ವಿಭಾಗಕ್ಕೆ ಕಾಲಿಟ್ಟದ್ದೆ. ಅಂದು ನಾನು ಇಷ್ಟಪಡುತ್ತಿದ್ದ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಸ್.ಬಾಲಸುಬ್ರಹ್ಮಣ್ಯರೊಡನೆ ಮಾತನಾಡಿ ಪುಳಕಿತನಾಗಿದ್ದೆ. ಇಲ್ಲಿಯ ವಿದ್ಯಾಥರ್ಿಯಾಗಿಬಿಟ್ಟೆ ಎಂಬ ಉತ್ಸಾಹದಲ್ಲಿದ್ದೆ. ಅಂತು ಪ್ರವೇಶವು ದೊರಕಿತು. ಆದರೆ ನನ್ನ ಜೊತೆಗೆ ಮತ್ತೊಬ್ಬ ಕೇರಳದ ವಿದ್ಯಾಥರ್ಿಗೆ ಪ್ರವೇಶ ದೊರಕಿದ್ದರಿಂದ ಸುರೇಖಾಳಿಗೆ ಪ್ರವೇಶ ದೊರಕಿರಲಿಲ್ಲ. ಆದರೆ ಮತ್ತೆ ಅವಳು ಹಟ ಹಿಡಿದು ಇಲ್ಲಿಗೆ ಬರುತ್ತೇನೆಂದಾಗ ಬೇಡ ಎಂದು ಬೈದಿದ್ದೆ. ಆದರೂ ಆಕೆ ಬಂದಳು ಅದು ಬೇರೆ.

ನಾನಿಂದು ವಿಶ್ವದ್ಯಾಲಯದಿಂದ ಕೊನೆಯ ಹೆಜ್ಜೆ ಬಿಡುವಾಗಲು ನನ್ನನ್ನು ಬೀಳ್ಕೊಟ್ಟಿದ್ದು ಅದೇ ಜಿಟಿ-ಜಿಟಿ ಮಳೆಯೆ. ಅಂದು ಯಾವ ಉತ್ಸಾಹದಲ್ಲಿ ನಾನು ಈ ವಿವಿ ಸೇರಲು ಬಂದಿದ್ದೇನೋ ಅದರ ದುಪ್ಪಟ್ಟು ಖುಷಿಯನ್ನು ಇಂದು ಅನುಭವಿಸುತ್ತಿದ್ದೇನೆ. ಆದರೆ ಆ ಮಧ್ಯದ ದಿನಗಳು ಮಾತ್ರ ನನ್ನ ಕಾಲೇಜು ಶಿಕ್ಷಣದ ಅತ್ಯಂತ ದುಃಖದ ದಿನ ಎಂದು ಬಣ್ಣಿಸಲೋ ಅಥವಾ ಏನು ಅನ್ನಬೇಕೋ ಗೊತ್ತಾಗುತ್ತಿಲ್ಲ.

ನಾನು ಉಜಿರೆಯಲ್ಲಿ ಸೈಕಾಲಜಿ ಕೊನೆಯ ಪರೀಕ್ಷೆ ಮುಗಿಸಿ ಬಂದಾಗಲು ಇದೇ ಮಳೆಯಲ್ಲಿ ತೋಯ್ದುಕೊಂಡು ಬಂದಿದ್ದೆ. ಆದರೆ ಆಗ ಕಣ್ಣಲ್ಲಿ ನನಗೆ ಗೊತ್ತಿಲ್ಲದೆ ನೀರು ಜಿಟುಕಿತ್ತು. ಆದರೆ ಇಂದು ನನ್ನ ಗೆಳೆಯರು ಅಂತಿದ್ದರು, `ರಾಜೀವ ಇವತ್ತು ನೆಲದ ಮೇಲಿಲ್ಲ. ಇಂತಹ ನಗು ಚಿರವಾಗಲಿ' ಎಂದು. ಆಗ ನನಗೆ ಅನಿಸಿದ್ದು ಹಾಗಾದರೆ ಕಳೆದ 2 ವರ್ಷದಲ್ಲಿ ನನ್ನ ನಗು ಎಲ್ಲಿ ಹೋಗಿತ್ತೆಂದು. ಯೋಚಿಸಿದರೆ ನನಗೂ ಗೊತ್ತಿಲ್ಲ.


ನಾನು ಈ ವಿಶ್ವವಿದ್ಯಾಲಯಕ್ಕೆ ಮಾತ್ರ ಪ್ರವೇಶ ಪತ್ರ ಹಾಕಿದ್ದೆ. ನನ್ನ ಸ್ನೇಹಿತರು ಬೈದರೂ ಕೂಡ ಏನೋ ಹುಚ್ಚು ಧೈರ್ಯ ಹಾಗೂ ಕೆಲ ಉಪನ್ಯಾಸಕರ ಮೇಲಿದ್ದ ಪ್ರೀತಿ ನನ್ನನ್ನು ಇಲ್ಲಿಗಷ್ಟೆ ಸೀಮಿತಗೊಳಿಸಿತು. ಆದರೆ ಇವೆಲ್ಲವೂ 2 ವರ್ಷ ಮುಗಿಯುವುದರೊಳಗೆ ಎಲ್ಲವೂ ಬದಲಾಯಿತು ಅಥವಾ ಬದಲಾಯಿಸಿದರು.

ನಾನು ನನ್ನ ಗೆಳೆಯರಿಗೆ ಉಗಿದಷ್ಟು ನನ್ನ ವೈರಿಗೂ ಉಗಿಯುವುದಿಲ್ಲ. ಆದರೆ ನನ್ನ ಗೆಳೆತನ ಇಂದಿಗೂ ಮುಂದುವರೆದಿದೆ. ಏಕೆಂದರೆ ನಮ್ಮಿಬ್ಬರ ನಡುವೆ ಗಲಾಟೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ಕಿರಾತಕರೂ ಇಲ್ಲ ಅಥವಾ ಅಂಥವರಿಗೆ ನಾವು ಅವಕಾಶ ನೀಡಲಿಲ್ಲ. ನನ್ನ ಗೆಳೆಯರನ್ನಷ್ಟೆ ಇಷ್ಟಪಡುತ್ತ, ನಾನು ಇಷ್ಟಪಡುತ್ತಿದ್ದರ ಕೆಲ ತಪ್ಪುಗಳನ್ನು ಹೇಳಿದಾಗ ನಾನೇ ತಪ್ಪಿತಸ್ಥನಾದೆ ಈ ವ್ಯವಸ್ಥೆ ಹಾಗೂ ಕಿರಾತಕರಿಂದ. ನಾನು ಇಷ್ಟಪಡುತ್ತಿದ್ದವರಿಗೂ, ಗೌರವಿಸುತ್ತಿದ್ದವರಿಗೂ ಆ ಚಾಡಿಪೋಕರೆ ಇಷ್ಟವಾಗುತ್ತ ಸಾಗಿದರು. ಅಂದಿನಿಂದ ವಿಶ್ವವಿದ್ಯಾಲಯ ಏನಕ್ಕೋ ದೂರವಾಗುತ್ತಾ ಹೋಯಿತು. ನನ್ನ ಲ್ಯಾಪ್ಟಾಪ್, ಕ್ಯಾಮರಾ ಹಾಗೂ ಉಜಿರೆಯ ಟೆಲಿಫೋನ್ ಸ್ನೇಹಿತರೇ ಜಗತ್ತಾಗುತ್ತಾ ಸಾಗಿದವು. ಮನವೇಕೋ ತೀರಾ ಹಳಸಿಹೋಯಿತು ಈ ವಿಷಯದಲ್ಲಿ.

ದಿನದಿಂದ ದಿನಕ್ಕೆ ನನ್ನ ಇಷ್ಟಗಳೆಲ್ಲಾ ಕಷ್ಟವಾಗುತ್ತ ಸಾಗಿತು ವಿವಿಗೆ ಸಂಬಂಧಪಟ್ಟಂತೆ. ನಾನು ಅನುಭವಿಸಿ ರೋಸಿದ ವಿವಿ ಘಟಿಕೋತ್ಸವದ ಆಡಂಭರ ಹಾಗೂ ರ್ಯಾಂಕ್ ವಿದ್ಯಾಥರ್ಿಗಳನ್ನು ನಡೆಸಿಕೊಳ್ಳುವ ಬಗೆ ಬಗ್ಗೆ ಒಂದು ಅಭಿಪ್ರಾಯ ನನ್ನ ಬ್ಲಾಗ್ನಲ್ಲಿ ಬಂದಾಗ ನನ್ನ ಬ್ಲಾಗ್ `ಬ್ಲಾಕ್ ಲಿಸ್ಟ್'ಗೆ ಸೇರಿತು. ನನ್ನ 6 ಇಂಟರ್ನಷಿಪ್ಗಳೆ ನನಗೆ ವೈಯಕ್ತಿಕವಾಗಿ ಅದ್ಭುತ ಅನುಭವ ನೀಡಿದರೂ, ತರಗತಿ ವಲಯದಲ್ಲಿ ಶಾಪವಾಯಿತು. ಅಷ್ಟರಲ್ಲಿ ಪ್ರಥಮ ಸೆಮಿಸ್ಟರ್ ಫಲಿತಾಂಶ ಬಂದಾಗ ಸಿಡಿಲು, ಗುಡುಗುಗಳೆಲ್ಲ ಬಂದೆರಗಿದಂತಾಯಿತು. ಅಂದಿನಿಂದ ಪೂತರ್ಿ ಮೌನಕ್ಕೆ ಶರಣಾದೆ. ಏಕೆಂದರೆ ಈ ಫಲಿತಾಂಶಕ್ಕೆ ಯಾರಲ್ಲು ಉತ್ತರವಿರಲಿಲ್ಲ. 'ನಾನಾ, ನೀನಾ' ಎಂದು ನೋಡುವ ಪರಿಸ್ಥಿತಿಯಲ್ಲು ಇರಲಿಲ್ಲ. ಉತ್ತರ ಪತ್ರಿಕೆಯಲ್ಲಿನ ಉತ್ತರಗಳಿಗಿಂತ ಇನ್ನು ಅನೇಕ(!?) ಅಂಶಗಳು ಅನಿವಾರ್ಯವಾಗುತ್ತವೆ ಅಂಕ ನೀಡಲು ಎಂಬ ಅಧಿಕೃತ ಉತ್ತರವು ದೊರಕಿದಾಗ, ನನ್ನ ಗುರಿ ಇದೇ ಜೂನ್ 14, 2010 ಆಗಿತ್ತು.

ಆದರೆ ಇವೆಲ್ಲದರ ನಡುವೆ ಮತ್ತೆ ನನ್ನ ಎಲ್ಲ ಫ್ಲ್ಯಾಶ್ಬ್ಯಾಕ್ ಮರೆತು ಹಗಲಿರುಳು ವಿಭಾಗದ ಮೇಲೆ ಪ್ರೀತಿ ಉಕ್ಕುವಂತೆ ಕೆಲಸ ಮಾಡಿದ್ದು 'ರೇನ್ಬೋ ಮೀಡಿಯಾ ಫೆಸ್ಟ್-10' ಯಶಸ್ಸಿಗಾಗಿ. ಅದೊಂದು ಕಾರ್ಯಕ್ರಮ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ್ದು. ಆ ಒಂದು ತಿಂಗಳ ನನ್ನ ಅಪ್ಪ-ಅಮ್ಮ ಕೂಡ ನನ್ನ ಫೋನಿಂದ ದೂರವಾಗಿದ್ದರು. ಅದಾಗಿ ಕೆಲವೇ ದಿನದಲ್ಲಿ ನನ್ನ ಜೀವನ ರೂಪಿಸಿಕೊಟ್ಟ ಉಜಿರೆ ಪತ್ರಿಕೋದ್ಯಮ ವಿಭಾಗದಲ್ಲಿ ಏರ್ಪಡಿಸಿದ್ದ ಮಾಧ್ಯಮ ಕಾಯರ್ಾಗಾರದಲ್ಲಿ ಮಾತನಾಡುತ್ತ, `ನಾನು ಇಲ್ಲಿ ಕನರ್ಾಟಕ ವಿಶ್ವವಿದ್ಯಾಲಯದ ವಿದ್ಯಾಥರ್ಿ ಅನ್ನುವುದಕ್ಕಿಂತ, ಉಜಿರೆಯ ಹಳೆ ವಿದ್ಯಾಥರ್ಿ ಎನ್ನಲು ಬಹಳಷ್ಟು ಖುಷಿಪಡುತ್ತೇನೆ' ಎಂಬುದು ಹಲವರ `ರಕ್ತದೊತ್ತಡ' ಹೆಚ್ಚಲು ಕಾರಣವಾಗುತ್ತದೆ ಎಂದು ತಿಳಿದಿರಲಿಲ್ಲ. ಇಲ್ಲೂ ಆ ಚಾಡಿಪೋಕರ ತಲೆ ಕೆಲಸ ಮಾಡಿತ್ತು. ನನ್ನ ಹಿಂದಿನ ಎಲ್ಲ ಕೆಲಸ ಮರೆತು ನನ್ನ ಆ ಮಾತಿನ ತಪ್ಪು ಗ್ರಹಿಕೆ ಅಥವಾ ಚಾಡಿಯಿಂದ ವಿಭಾಗದ ಮೇಲೆ ಪ್ರೀತಿ ಹಾಗೂ ಗೌರವವಿಲ್ಲದ ವಿದ್ಯಾಥರ್ಿ ನಾನಾಗಿ ಪರಿಣಮಿಸಿದ್ದೆ.

ನಾನು ನಾಳೆ ಯಾವುದೇ ಒಂದು ಮಾಧ್ಯಮ ಪ್ರವೇಸಿದಾಗಲೂ, ನನಗೆ ಕಲಿಸಿದ ಶಿಕ್ಷಣ ಸಂಸ್ಥೆಯಲ್ಲಿ ಸೇರಿದಾಗ ನಾನು ಅಲ್ಲಿಯ ವಿದ್ಯಾಥರ್ಿಯಾಗುತ್ತೇನೆಯೆ ಹೊರತು, ಪತ್ರಿಕಾ ಪ್ರತಿನಿಧಿಯಲ್ಲ.

ನಾನು ಇಷ್ಟಪಡುವ ವ್ಯಕ್ತಿಗೆ ನನ್ನಿಂದಲೇ ರಕ್ತದೊತ್ತಡ ಏರುತ್ತದೆಂಬ ಮಾತುಗಳು ಕೇಳಿ ಬಂದಾಗ ಮುಂದಿನ ಒಂದು ತಿಂಗಳು ನಾನು ಏನು ಮಾಡಿದೆನೆಂಬುದು ನನಗೆ ಗೊತ್ತಿಲ್ಲ. ಎರಡನೇ ಬಾರಿಗೆ ಪದವಿ ಶಿಕ್ಷಣ ಮುಗಿಯಲು ಇನ್ನೆರಡು ತಿಂಗಳಿದ್ದಾಗ ವಿಭಾಗ ಬಿಡುವ ನಿಧರ್ಾರ ಕೈಗೊಂಡಿದ್ದೆ. ಆದರೆ ಎಂದಿನಂತೆ ಬೈದು, ಸಮಾಧಾನ ಮಾಡಿ ಇಂದು ಪರೀಕ್ಷೆ ಮುಗಿಸಿ ಕೂರಲು ಕಾರಣರಾದವರು ನನ್ನ ಆಪ್ತ ಸ್ನೇಹಿತರಾದ ಸುರೇಖಾ ಹಾಗೂ ಪವನ್.

ನನ್ನ ಪದವಿ ಶಿಕ್ಷಣದಲ್ಲಿ ನನಗೆ ಹಲವಾರು ವಿಷಯಗಳನ್ನು ಮನವರಿಕೆ ಮಾಡಿಕೊಟ್ಟ ಪ್ರೀತಿಯ ಬಾಲು ಸರ್, ಗಂಗಾದರಪ್ಪ ಹಾಗೂ ಸಂಜಯ ಮಾಲಗತ್ತಿ ಸರ್ಗೆ ಒಂದು ಪುಟ್ಟ ಸಲಾಮ್... ಸ್ನೇಹಿತರಂತೆ ನಮ್ಮೊಂದಿಗೆ ಬೆರೆತ ಜಯಣ್ಣ ಹಾಗೂ ಅಬ್ಬಾಸ್ ಬಾಯಿಗೂ ಪ್ರೀತಿಯ ವಂದನೆ...

ಕೊನೆಯದಾಗಿ ನಾನು ಪ್ರತಿಸಿ ಬಂದ, ಈಗಲು ಪ್ರೀತಿಸುವ(ಷರತ್ತಿನೊಂದಿಗೆ) ವಿಭಾಗಕ್ಕೆ ಗೌರವದ ಧನ್ಯವಾದ...
ಫುಲ್ ಸ್ಟಾಪ್: ಹಿತ್ತಾಳೆ ಕಿವಿಗಳು ಹೆಚ್ಚಾದಾಗ ಕಿವಿ ಚುಚ್ಚುವ ಬಾಯಿಗಳು ಅತಿಯಾಗುತ್ತವೆ. ಉಳಿದವರಿಗೆ ಮೌನವೇ ಪ್ರಶ್ನೋತ್ತರಗಳಾಗುತ್ತವೆ!!!

Sunday, May 16, 2010

ನಾನೂ.... ನನ್ನಲ್ಲೂ ಮತ್ತೊಂದಿಷ್ಟು ಕನಸು

ಮೊದಲೇ ಹೇಳಿ ಬಿಡುತ್ತೇನೆ, ನಾನು ಚಿತ್ರ ವಿಮರ್ಷೆ ಗೆ ಹೊರಟಿಲ್ಲ. ಪ್ರಕಾಶ್ ರೈ ಕನಸಿನ ಕೂಸು 'ನಾನೂ.. ನನ್ನ ಕನ್ನಸು...' ಚಿತ್ರ ನೋಡಿದಾಗ ಏನೇನೋ ಗೀಚಬೇಕೆಂದು ಅನಿಸಿತು. ಮನಸ್ಸಲ್ಲಿ ಏನೋ ಒಂದು ಗುರುತಿಸಲಾಗದ ಖುಷಿ ಇನ್ನು ಅಪ್ಪನಾಗದ, ಮಗಳು ಅಲ್ಲದ ನನಗೆ ಮೂಡಿತು. ಹುಬ್ಬಳ್ಳಿಯಿಂದ ಧಾರವಾಡದ ರೂಮಿನವರೆಗೆ ಬಂದು ಲ್ಯಾಪ್ಟಾಪ್ ಮುಂದೆ ಕೂತು ಬರೆಯುವವರೆಗೂ ಮನದಲ್ಲಿ ಏನೋ ತುಮುಲ. ನನ್ನ ಭಾವನೆಗಳನ್ನು ಅಕ್ಷರ ರೂಪ ನೀಡಬೇಕೆಂಬ ಹಂಬಲ.
ಈ ಮುಂಚೆ ಎಷ್ಟೆ ಚಿತ್ರ ನೋಡಿದರೂ ಮನಸ್ಸು ಈ ರೀತಿ ಆಗಿರಲಿಲ್ಲ. ಗೆಳೆಯ ಕಾತರ್ಿಕ್ 'ನಾನೂ.. ನನ್ನ ಕನ್ನಸು...' ಚಿತ್ರದ ತಮಿಳು ಅವತರಣಿಕೆ ನೋಡು ಎಂದರು ಸುಮ್ಮನೇ ಹೂಂ ಎಂದಿದ್ದೆ. ಆದರೆ ನೋಡುವ ಕಾಯಕಕ್ಕೆ ಅಂಬೆಗಾಲು ಇಟ್ಟಿರಲಿಲ್ಲ. ಆದರೆ ನಾಳೆ ನೋಡುತ್ತೇನೆ. ಮತ್ತೆ, ಮಗದೊಮ್ಮೆ 'ನಾನೂ.. ನನ್ನ ಕನ್ನಸು...' ನೋಡುವ ಹಂಬಲ ಆಗುತ್ತಿದೆ.
ಪ್ರಕಾಶ್ ರೈ ಎಂದರೆ ಯಾವಾಗಲೂ ಏನೋ ಒಂದು ವಿಶೇಷತೆ ನನ್ನಲ್ಲಿ ಯಾವಾಗಲೂ ಮೂಡುತ್ತದೆ. ಆ ಸಿಟ್ಟಿನ ನಗು, ತೇವ ಕಣ್ಣುಗಳು ಏಕೊ ಯಾವಾಗಲು ಕಾಡುತ್ತದೆ. ಅದೇ ನಿರೀಕ್ಷೆಗಳು ನನ್ನನ್ನು ಇಂದು ಚಿತ್ರ ಮಂದಿರಕ್ಕೆ ಕೊಂಡೊಯ್ದಿತ್ತು. ಎರಡೂವರೆ ತಾಸು ಅಕ್ಷರಶಃ ಚಿತ್ರದೊಳಗೆ ನಾನು ಹೊಕ್ಕಿ ಹೋಗಿದ್ದೆ. ಇನ್ನು ಹೊರಬರಲಾಗುತ್ತಿಲ್ಲ. ಪ್ರಕಾಶ್ ರೈ ತಂಡಕ್ಕೆ ಮೊದಲು ಪುಟ್ಟ ಪುಟ್ಟ ಸಲಾಮ್...
ಯಾವಾಗಲೂ ನನ್ನ ಗೆಳೆಯರು ನನ್ನನ್ನು ತೃಪ್ತಿಯಿಲ್ಲದ ಜೀವಿ ಎಂದು ಕಾಡಿಸುತ್ತಾರೆ. ನಿನ್ನ ನಿರೀಕ್ಷೆ ಈಡೇರಿಸಲು ಭಗವಂತ ಬರಬೇಕು ಎಂದು ಛೇಡಿಸುತ್ತಾರೆ. ಆದರೆ ಅಪರೂಪಕ್ಕೆ ಎಂಬಂತೆ 'ನಾನೂ.. ನನ್ನ ಕನ್ನಸು...' ನನ್ನ ಎಲ್ಲ ನಿರೀಕ್ಷೆಗಳನ್ನು ಪೂರೈಸಿದೆ.
ಚಿತ್ರ ಆರಂಭವಾದಾಗ ಒಂದು ಮಗುವಾದೆ. ಆ ಮಗುವಿನ ಪ್ರತಿಯೊಂದು ಆಟ, ಚೇಷ್ಟೆಗಳು ನಾನು ಮಾಡಿದ ಆಟ ನೆನಪಾಯಿತು ಅಥವಾ ನಾನು ಹಾಗೆ ಮಾಡಲೇ ಇಲ್ಲವಲ್ಲ ಎಂಬ ನೋವು ಕಾಣಿತು. ಆ ಕನಸು ಅಪ್ಪನ ಬೂಟಿಗೆ ಕಾಲು ತೂರಿಸಿದ ದೃಶ್ಯ ಕಣ್ಣೆದುರಿಗೆ ಬಂದಾಗ ನಾನು ಹಾಕಿಕೊಂಡು ಬಿದ್ದದ್ದು ನೆನಪಾಯಿತು. ಅಪ್ಪ ಶೇವಿಂಗ್ ಮಾಡುವಾಗ ಕನಸು ತಾನು ಮುಖಕ್ಕೆ ಶೇವಿಂಗ್ ಕ್ರೀಮ್ ಹಚ್ಚಿಕೊಂಡದ್ದು ನೋಡಿದಾಗ, ಇನ್ನು ಮೀಸೆ ನೆರೆಯದೇ ಇರುವಾಗ ಮೀಸೆ ಕೆತ್ತುಕೊಂಡದ್ದು ನೆನಪಾಯಿತು. ಬ್ರಿಜೇಶ್ ಪಟೇಲ್ನಿಗೆ ಕನಸು ಅವ್ವನಾದದ್ದು ನೆನಪಾದಾಗ ಇಂತಹುದೇ ಒಬ್ಬ ಹುಚ್ಚ ರಾಜು ಮೇಸ್ತ್ರಿಗೆ ನಾವು ಕಾಡಿ, ಹೊಡೆಸಿಕೊಂಡ ಗಳಿಗೆ ಒಮ್ಮೆ ಹಾರಿಹೋಯಿತು. ಹೀಗೆ ಮುಂದುವರೆಯುತ್ತಾ ಚಿತ್ರ ಮುಗಿಯುವ ಹೊತ್ತಿಗೆ ನಾನು ಅಪ್ಪನಾಗಬೇಕೆಂದು ಅನಿಸಿಬಿಟ್ಟಿತು!
'ನನ್ನ ಪುಟ್ಟಮ್ಮ, ನನ್ನ ಹಿರಿಯಮ್ಮ' ಹೇಗಾದಳು ಎಂದು ವಿವರಿಸುತ್ತಾ ಹೋಗುವ ಚಿತ್ರ, ಕನಸು ತಾನು ಬೆಳೆಯುವುದರ ಜೊತೆ ಅಪ್ಪನನ್ನು, ಆತನ ಕನಸನ್ನು ಬೆಳೆಸುವ ಪರಿ ಅದ್ಭುತ. ಅದೇ ಸನ್ನಿವೇಶ ಪ್ರತಿಯೊಬ್ಬರನ್ನು ಹಿಡಿದಿಡುತ್ತದೆ. ಚಿತ್ರ ಕಥೆ ಸಾಮಾನ್ಯವಾಗಿದ್ದರೂ ಅದು ಪ್ರತಿಯೊಬ್ಬರ ಮನವನ್ನು ತಟ್ಟುತ್ತದೆ. ಚಿತ್ರದಲ್ಲಿ ಬರುವ ಒಂದಾದರೂ ಸನ್ನಿವೇಷವನ್ನು ನಾವೆಲ್ಲರೂ ಒಮ್ಮೆಯಾದರೂ ಅನುಭವಿಸಿಯೇ ಇರುತ್ತೇವೆ. ಅದಕ್ಕಾಗಿಯೆ ಚಿತ್ರ ಮತ್ತಷ್ಟು ಹತ್ತಿರವಾಗುತ್ತದೆ, ಅದೂ ನಮ್ಮ ಕನಸು ಕೂಡ ಆಗಿಬಿಡುತ್ತದೆ.
'I know, what I am doing' ಈ ಶಬ್ಧದ ಪ್ರಯೋಗ ಬಹಳ ಇಷ್ಟವಾಯಿತು. ರಾಜು ಉತ್ತಪ್ಪಗೆ ಕನಸು 12 ವರ್ಷವಾದಾಗಲಿಂದ ಇಂದಿನವರೆಗೂ ಕಾಡಿದ ಆ ಶಬ್ಧ ನನ್ನನ್ನು ಕೂಡ ಬಹಳಷ್ಟು ಕಾಡಿತು. ಆದರೆ ಅದರ ಪ್ರಾಮುಖ್ಯತೆ ಕೂಡ ಇಂದು ನನಗೆ ತಿಳಿಯಿತು ಅಂದುಕೊಂಡಿದ್ದೇನೆ. ಕೆಲ ದಿನಗಳ ಹಿಂದೆ ನನ್ನ ಆತ್ಮೀಯರೊಬ್ಬರು ಇದೇ ಶಬ್ಧ ಉಪಯೋಗಿಸಿದ್ದರು. ನಾನು ಅವರನ್ನು ಬಹಳ ಹಚ್ಚಿಕೊಂಡಿದ್ದರಿಂದ ಈ ಚಿತ್ರ ಮಮದಿರಕ್ಕೆ ಕಾಲಿಡುವಾಗಲೂ ಆ ಶಬ್ಧ ನನ್ನ ಮನ ಕೊರೆಯುತ್ತಿತ್ತು. ಆ ಶಬ್ಧದಲ್ಲಿ ಏನೋ ನಿಷ್ಠುರತೆ ಕಾಣುತ್ತಿತ್ತು. 'I know, what I am doing' ಅದರಲ್ಲಿನ ಭಾವ ನನ್ನಲ್ಲಿಂದ ದೂರವಾಗುತ್ತಿದ್ದಾರೋ ಎಂಬ ಭಾವನೆ ಮೂಡಿಸಿತ್ತು. ಆದರೆ ಆ ಶಬ್ಧ ನನ್ನಲ್ಲಿಂದಲೇ ನಮ್ಮ ಆತ್ಮೀಯರಲ್ಲಿ ಮೂಡಿದ ಒಂದು ಜವಬ್ದಾರಿಯುತ ಹಾಗೂ ಧೃಡ ವಿಶ್ವಾಸದ ಸಂಕೇತ ಎಂಬುದು ಇಡೀ ಚಿತ್ರ ನನಗೆ ಸಾರುತ್ತಾ ಹೋಯಿತು ಅನಿಸಿತು.
ನಮ್ಮ ಯಾವುದೋ ನಿರೀಕ್ಷೆಗಳನ್ನು ನಮ್ಮ ಅಪ್ಪ-ಅಮ್ಮಂದಿರು ಈಡೇರಿಸದಿದ್ದಾಗ ಬೇಸರ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಅವರು ಕೂಡ ನಮ್ಮ ಮೇಲೆ ಎಷ್ಟೊಂದು ಕನಸಿನ ಗೋಪುರ ಕಟ್ಟಿಕೊಂಡು ಪೂಜೆ ಮಾಡಿರುತ್ತಾರೆ. ಕೆಲವು ಸಲ ಆ ಪೂಜೆಗೆ ನಾವೆಷ್ಟೆ ವಿಘ್ನ ತಂದರು ಅದನ್ನು ಸಹಿಸಿಕೊಳ್ಳುತ್ತಾ, ಯಾವುದೇ ಬೇಜಾರು ತೋರ್ಪಡಿಸದೇ ನಗುತ್ತಾರೆ, ಹುರಿದುಂಬಿಸುತ್ತಾರೆ.
ಅಪ್ಪ-ಅಮ್ಮನ ಕನಸಿಗೆ ಕೊನೆಯಿಲ್ಲ. ನಾವಿಡುವ ಪ್ರತಿಯೊಂದು ಹೆಜ್ಜೆಯಲ್ಲೂ ವರ್ಣಮಯ ಕನಸು ಕಾಣುತ್ತಾರೆ. ನಾವು ಕಾಲೇಜು ಮೆಟ್ಟಿಲು ಹತ್ತುವವರೆಗೂ ಆ ಕನಸುಗಳು ಅವರ ಪ್ರಕಾರವೇ ನಡೆಯುತ್ತವೆ. ನಮ್ಮಿಬ್ಬರ ಕನಸು ಒಂದೇ ಆಗಿರುತ್ತದೆ. ಅಪ್ಪ ಎಂಜನೀಯರ್ ಅಂದರೆ ನನ್ನ ಕನಸು ಹಾಗೇ ಮಾಪರ್ಾಡು ಗೊಂಡಿರುತ್ತದೆ. ಆದರೆ ಯಾವಾಗ ಪ್ರೌಢಿಮೆ ಬರುತ್ತದೋ ನಾವು ಕನಸು ಕಾಣಲು ಪ್ರಾರಂಭಿಸುತ್ತೇವೆ. ನಮ್ಮ ಕನಸಿನ ಲೋಕಕ್ಕೆ ಸ್ನೇಹ ಜೀವಿಗಳು ಹಾರಿ ಬರುತ್ತಾರೆ. ಆಗ ನಾವು ಅವರಿಗೆ ಕನಸು ಕಟ್ಟುತ್ತೇವೆ, ಅವರು ನಮಗಾಗಿ ಕನಸು ಕಾಣುತ್ತಾರೆ. ಈ ಕನಸಿನ ಪ್ರಪಂಚಕ್ಕೆ ಕೊನೆಯೇ ಇಲ್ಲ. ಆದರೆ ಕೆಲವರು ತಮಗೆ ಅವಶ್ಯಕತೆ ಇರುವಷ್ಟು ಸಮಯ ಕನಸು ಕಂಡು ನಂತರ ಕನಸನ್ನು ತಮಗಷ್ಟೇ ಸಿಮೀತಗೊಳಿಸಿಕೊಂಡು ಬಿಡುತ್ತಾರೆ. ಆಗ ಇಂತಹ ಚಿತ್ರಗಳು ನಮಗೆ ಏನೋ ಒಂದು ಖುಷಿ ನೀಡುತ್ತವೆ.
ಆದರೆ ಕೊನೆಯಲ್ಲಿ ನಮಗೆ ಅನಿಸುವುದು ಈ ಕನಸಿನ ಲೋಕದಲ್ಲಿ ನಮಗಾಗಿ ನೈಜ ಕನಸಿನ ಸೌಧ ಕಟ್ಟಿಕೊಂಡು ಅದಕ್ಕಾಗಿ ದುಡಿಯುವವರು ಕೆಲವೇ ಕೆಲವು ಮಂದಿ, ಅವರಲ್ಲಿ ಅಪ್ಪ-ಅಮ್ಮ ಮತ್ತು ಕೆಲವೇ ಕೆಲವು ಸ್ನೇಹಿತರು. ಆ ಸೌಧ ಕೆಡವುವ ಕೆಲಸಕ್ಕೆ ಕೈ ಹಾಕದಿರೋಣ. ಆ ಕನಸಿನ ಸೌಧದ ಹಿಂದೆ ಅದೆಷ್ಟೊ ಅಘಮ್ಯ ಪ್ರೀತಿ ಇರುತ್ತದೆ, ನಂಬಿಕೆ ಮನೆ ಮಾಡಿರುತ್ತದೆ, ಅದೆಷ್ಟೋ ತಾಳ್ಮೆ, ತ್ಯಾಗ ಮೈಗೂಡಿಕೊಂಡಿರುತ್ತದೆ. ಆದರೆ ಮಜಾ ಎಂದರೆ ಕನಸಿನ ಆಶಾ ಸೌಧ ಕಟ್ಟಿಕೊಂಡವರು ಅದೆಷ್ಟೆ ನೋವು ಬಂದರು ಅದನ್ನು ಪಕ್ಕಕ್ಕೆ ಸರಿಸುತ್ತಾರೆ.

ಹಾಂ... ಅಂದ ಹಾಗೆ ಚಿತ್ರ ಮಂದಿರದಲ್ಲಿ ಯಾರದೇ ಸಿಳ್ಳೆ, ಕಿರುಚಾಟವಿಲ್ಲದೇ ನೋಡಿದ ಪ್ರಥಮ ಚಿತ್ರ 'ನಾನೂ.. ನನ್ನ ಕನ್ನಸು...'. ಇಂತಹ ಇನ್ನಷ್ಟು ಕನಸುಗಳು ಕನ್ನಡದಲ್ಲಿ ಬರುತ್ತಿರಲಿ.
ಫುಲ್ ಸ್ಟಾಪ್: ಚಿತ್ರ ಮಂದಿರದಿಂದ ಹೊರಗೆ ಬಂದ ಕೂಡಲೆ ಸ್ನೇಹಿತೆಗೆ 'ನಾನೂ.. ನನ್ನ ಕನ್ನಸು...' ನೋಡಿದೆ, ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆ ಎಂದೆ. ಅದಕ್ಕೆ ಅವಳು ಯಾವ ಕನಸು ಎಂದಿದ್ದಳು. ನಾನು ಅಪ್ಪನಾಗಿ ಕನಸನ್ನು ಕಾಣುವುದು. ಅದರಲ್ಲಿ ಏನೋ ಮಜಾ ಇದೆ ಅನಿಸುತ್ತೆ. ಹತ್ತು ವರ್ಷದ ಮುಂದಿನದಕ್ಕೆ ಇಂದೇ ಕನಸನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದ್ದೆ. ಅಪ್ಪನಾಗದ ನನಗೆ ಇಷ್ಟು ಕನಸುಗಳಿಗೆ ಕಾರಣವಾದ ಈ 'ನಾನೂ.. ನನ್ನ ಕನ್ನಸು...' ಅದೆಷ್ಟೋ ಅಪ್ಪ-ಅಮ್ಮಂದಿರಿಗೆ ಅವರ ಕನಸುಗಳು ನೆನಪಾಗಿ ಕಣ್ಣೀರಾಗಿರಬಹುದು ನೆನಪಿನ ಬುತ್ತಿಯಾಗಿರಬಹುದು. ಈಗಲೇ ನನಗೆ ಕನಸಿನ ಬೀಜ ಬಿತ್ತಿದ ಪ್ರಕಾಶ್ ರೈಗೆ ಪ್ರೀತಿಯ ವಂದನೆ.

Saturday, May 08, 2010

ಇವತ್ತು ಅವ್ನು ಕೊಟ್ಟ ನಾನು ಇಸ್ಕಂಡೆ, ನಾಳೆ ಖಾಲಿ ಖಾಲಿ

'ಈ ಸಾರಿ ನಮ್ಮ ಬಸಪ್ಪ ಭಾರಿ ಖಚರ್್ ಮಾಡ್ಯಾನ ನೋಡು, ಅವಂಗೆ ಹೋಲಕೆ ಮಾಡದ್ರ ಉಳದವ್ರು ಏನಿಲ್ಲ ನೋಡು. ಅವ್ನವ್ನ ಏನು ಹೋಳಿ ಅಂತಿ, ಎಲ್ಲರ ಬಾಯ್ನಾಗೂ ...(ಸೆನ್ಸಾರ್) ಮಗಂದೇ ಸುದ್ದಿ ನೋಡ. ಆರ್ಸಿ ಬರ್ತಾನ್ ಅವ್ನು. ದುಡ್ಡು ಖಚರ್ು ಮಾಡದವಂಗೆ ಓಟು ಹಾಕಬಕಲಾ ಮತ್ತೆ. ಅಲ್ಲಾ ಉಳದವ್ರಿಗೆ ಹಣ ಕೊಡಕೆ ಏನಾಗೈತಂತೀನಿ'
ಇಂತಹ ಖಡಕ್ 'ಗಾಂಧಿ' ನೋಟಿನ ಮಾತುಗಳು ನಿನ್ನೆ ಬಸ್ನಲ್ಲಿ ಕೇಳಿ ಬರುತ್ತಿತ್ತು. ನಾನು ಧಾರವಾಡದ ಹೊರವಲಯದಲ್ಲಿ ರೂಮು ಮಾಡಿರುವುದರಿಂದ ಮಾಕರ್ೆಟ್ ಹೋಗಬೇಕೆಂದರೆ ಹಳ್ಳಿಗಳಿಂದ ಬರುವ ಬಸ್ಸೆ ಗತಿ. ಯಾವುದೇ ಸೀಟಿನಲ್ಲಿ ಕೂತರು ಕಳೆದ ಒಮದು ವಾರದಿಂದ ಅಕ್ಕಪಕ್ಕದವರ ಮಾತು ಗ್ರಾಮ ಪಂಚಾಯತಿ ಚುನಾವಣೆ ಮತ್ತು ದುಡ್ಡು ಬಿಟ್ಟು ಬೇರೆ ಕಡೆ ವಾಲುತ್ತಲೇ ಇಲ್ಲ. ಹಾಗೇ ಬಸ್ಸು ಇಳಿದಿ ಮಾಮೂಲಿಯಾಗಿ ಯಾವುದೇ ಅಂಗಡಿ ಹೊಕ್ಕಿದರು ಅಲ್ಲಿ ಕೂಡ ಚುನಾವಣೆ ಕಾವು ಕಾಣುತ್ತದೆ. ಯಾವುದೋ ಹಳ್ಳಿ ಹೈದ ಒಬ್ಬ ದುಡ್ಡಿಗಾಗಿ ಯಾರದೋ ಹತ್ತಿರ ಫೋನಿನಲ್ಲಿ ಮಾತನಾಡುವುದು, ಪ್ರಚಾರದ ವೈಖರಿ ಹೀಗೆ ಕಳೆದ ಒಂದು ವಾರದಿಂದ ಹತ್ತು ಹಲವಾರು ವಿಷಯಗಳು ಕಿವಿಗೆ ಬೀಳುತ್ತಿದ್ದಾಗ ಗಾಂಧೀಜಿಯವರ ಗ್ರಾಮ ಸ್ವರಾಜ್ ಕಲ್ಪನೆ ಸಾಕಾರಕ್ಕೆ ಠೊಂಕ ಕಟ್ಟಿ ನಿಲ್ಲುತ್ತಿರುವವರ ಹಾಗೂ ಗ್ರಾಮ ವಾಸಿಗಳನ್ನು ಪರಿಸ್ಥಿತಿ ನೆನಪಾಗುತ್ತಾ ಹೋಯಿತು.
ಹಾಗೇ ಅದೇ ಬಸ್ನಲ್ಲಿ ಪಕ್ಕದ ಸೀಟಿನಲ್ಲಿ ಕುಳಿತ ಮಹಿಳೆಯ ಮಾತನ್ನು ಆಲಿಸಿದರೆ ಮತ್ತೊಂದು ಕೌತುಕವಿತ್ತು. 'ಅಲ್ಲಾ ಅಕ್ಕ, ನಮ್ಮ ಯಜಮಾನ್ರ ತಮ್ಮ ಇಲೆಕ್ಸನ್ಗೆ ನಿಂತಾನ. ಬರೋಬ್ಬರಿ 45 ಸಾವಿರ ಖಚರ್ು ಮಾಡ್ಯಾನ ಇಗ್ಲೆ. ಊರು ಹೆಂಗಸ್ರೆಲ್ಲಾ ಮಾತಾಡಕೆ ಹತ್ತಾರ, ಇವ ಚೋಲೊ ಅದಾನ, ಹಣ ಕೊಟ್ಟು ಚೊಲೋ ಕೆಲ್ಸ ಮಾಡದ ನೋಡ. ನಾವು ಹೆಂಗಸ್ರು ದುಡ್ಡು ಮಾಡೋ ಹಂಗಾಯ್ತು. ಮೊದಲ ಆದ್ರ ಗಂಡಸ್ರಿಗ ಹೆಂಡ ಕುಡ್ಸಿ ನಮ್ಮ ಹತ್ರ ಬಂದು ಅವಂಗೆ ಓಟು ಹಾಕು ಅಂತಿದ್ರು. ಈಗಾದ್ರ ಹೆಂಡದ ಜಬರ್ದಸ್ತಿ ಇಲ್ಲಾ ನೋಡು. ಚೊಲೋದ ಆತು'
ಹೀಗೆ ಯಾರದೇ ಮಾತು ನೋಡಿದ್ರು ಅವರಲ್ಲಿ ಈ ಹಣ ಹಂಚುವುದರ ಬಗ್ಗೆ ಯಾವುದೇ ಪಶ್ಚಾತ್ತಾಪ ಅಥವಾ ಬೇಸರ ಕಾಣುತ್ತಿರಲಿಲ್ಲ. ಬದಲಿಗೆ ಹಣ ಕೊಡದೇ ಇರುವವರ ಬಗ್ಗೆ ಅಸಹನೆಯಿದೆ.
ಅದರೊಡನೆ ಅವರು ತೆಗೆದುಕೊಳ್ಳುವ ಹಣಕ್ಕು ಸಮಜಾಯಿಷಿ ಬೇರೆ ಇದೆ. 'ಅವ್ರು ಕೆಲಸ ಮಾಡೋದು ಅಷ್ಟ್ರಲ್ಲೆ ಐತಿ. ಅವ್ರು ಕೊಟ್ಟಷ್ಟು ತಗಮಡಿದ್ದೆ ಬಂತು' ಎಂದು ಮೂಗು ಮುರಿಯುತ್ತಾರೆ.
ಒಮ್ಮೆ ಆಲೋಚಿಸಿ. ಇಂದಿನ ಈ ಚುನಾವನೆ ಪ್ರಕ್ರಿಯೆ ಯಾವ ಪರಿಯಾಗಿದೆ ಎಂದು. ಈ ವ್ಯವಸ್ತೆ ಒಂದು ದೊಡ್ಡ ಸರಪಳಿಯಂತಾಗಿದೆ.
ರಾಜಕಾರಣಿ ತಾನು ಕೆಲಸ ಮಾಡಿಲ್ಲ ಎಂದು ಮೊದಲು ಲಕ್ಷಾಂತರ ಹಣ ಹಂಚಲು ಪ್ರಾರಂಭಿಸಿದ. ದುಡ್ಡು ತೆಗೆದುಕೊಂಡ ಜನ ಜನ ಪ್ರತಿನಿಧಿಗಳಿಗೆ ದುಂಬಾಲು ಬಿದ್ದು ಕೆಲಸ ಮಾಡಿಸಿಕೊಳ್ಳುವ ನೈತಿಕತೆ ಕಳೆದುಕೊಂಡರು. ಆತ 5 ವರ್ಷದ ಅವಧಿಯಲ್ಲಿ ಚುನಾವಣೆಗೆ ಖಚರ್ು ಮಾಡಿದ ಹಣ, ಅದರ ಬಡ್ಡಿ ಹಾಗೂ ಮುಂದಿನ ಚುನಾವಣೆಗೆ ಹಣ, ಮತ್ತದಕ್ಕೆ ಜನ್ಮ ಜನ್ಮಾಂತರಕ್ಕೂ ಕೂತುಂಡರು ಕರಗದಷ್ಟು ಹಣ ಕೂಡಿಡಲು ಆರಂಭಿಸಿದ. ಹೀಗೆ ಪ್ರತಿಯೊಬ್ಬರು ಒಂದೊಂದು ರೀತಿಯ ಸಮಜಾಯಿಷಿ ನೀಡುತ್ತ ಸಾರ್ವಜನಿಕ ಹಣ ಲೂಟಿಯಾಗುತ್ತಿದ್ದರೆ, ಅದಕ್ಕೆ ನಾವೇ ಸಾಕ್ಷಿಗಳಾಗಿ ಮತ್ತೊಂದೆಡೆ ಕಾರಣೀಭೂತರು ಕೂಡ ಆಗುತತಾ ಸಾಗಿದೆವು.
ಇಷ್ಟು ವರ್ಷ ಸ್ವಲ್ಪ ಮಿ.ಕ್ಲೀನ್ ಪಟ್ಟ ಹೊಂದಿದ್ದ ಪಂಚಾಯತಿ ವ್ಯವಸ್ಥೆ ಕೂಡ ಹದ ತಪ್ಪಿತು.
ಮೊದಲೆಲ್ಲ ಪಂಚಾಯತಿ ಚುನಾವಣೆ ಎಂದರೆ ಹತ್ತು-ಹದಿನೈದು ಜನರ ಗುಂಪು ಒಂದು ಸಣ್ಣ ಕರ ಪತ್ರಗಳನ್ನಿಟ್ಟುಕೊಂಡು ಕೆಲವೆ ಸಾವಿರದೊಲಗೆ ಚುನಾವಣೆ ಮುಗಿಯುತ್ತಿತ್ತು. ಪ್ರಚಾರದಲ್ಲೊಂದು ಆತ್ಮೀಯತೆ ಇರುತ್ತಿತ್ತು. ಅಭ್ಯಥರ್ಿಗಳ ಮೇಲಿನ ಗೌರವಕ್ಕೋ, ಅಥವಾ ವ್ಯವಸ್ತೆಯ ಮೇಲಿನ ಪ್ರೀತಿಗೋ ಗೊತ್ತಿಲ್ಲ, ಪ್ರಚಾರಕ್ಕೆ ಬಂದವರಿಗೆ ಆತಿಥ್ಯ ನೀಡುತ್ತಿದ್ದರು. ಊಟ ಹಾಕುತತಿದ್ದರು. ಈ ವರ್ಷ ಮಾತ್ರ ಕೇವಲ ವ್ಯವಹಾರದ ಮಾತುಗಳು ಮಾತ್ರ. ಊಟದ ವ್ಯವಸ್ಥೆ ಅಭ್ಯಥರ್ಿಯ ತಲೆಯ ಮೇಲೆ. ಅಬ್ಯಥರ್ಿ ಆ ಮಟ್ಟದ ಸಂಬಂಧ ಗೌರವ ಉಳಿಸಿಕೊಂಡಿದ್ದಾನೆ!
ಗ್ರಾ.ಪಂ ಚುನಾವಣೆಗಳಲ್ಲಿ ಬ್ಯಾನರ್ ಹಾಗೂ ಕಟೌಟ್ ಸಂಸ್ಕೃತಿಯಿಂದ ಬಹಳಷ್ಟು ದೂರವಿತ್ತು. ಅಥವಾ ಕಂಡೆ ಇರಲಿಲ್ಲ ಎಂದರು ತಪ್ಪಿಲ್ಲ. ಆದರೆ ಈ ಸಲ ನಾನು ಕುತೂಹಲಕ್ಕೆ ಎಂಬಂತೆ ಧಾರವಾಡದ ಕೆಲವು ಬ್ಯಾನರ್ ಪ್ರಿಂಟಿಂಗ್ ಅಂಗಡಿಗಳನ್ನು ಭೇಟಿ ಮಾಡಿದಾಗ ಅಲ್ಲಿ ನಾನು ಕಂಡಿದ್ದು ಬರಿ ಗ್ರಾ.ಪಂ ಅಭ್ಯಥರ್ಿಗಳ ಕೈ ಮುಗಿದ ಬ್ಯಾನರ್ಗಳು, ಅರಲ್ಲಿ ಕೆಲವು ಬೋಗಸ್ ಆಶ್ವಾಸನೆಗಳು.
ನನ್ನದು ಪಕ್ಕ ಮಲೆನಾಡಿನ ಒಂದು ಹಳ್ಳಿ. ಅಲ್ಲಿ ಯಾವಾಗಲು ಚುನಾವಣೆ ನಡೆಸುವುದು ಅಂತಹ ದುಬಾರಿ ಕೆಲಸವಾಗಿರಲಿಲ್ಲ. ಆದರೆ ಇಂದು ಮೊನ್ನೆ ಒಬ್ಬ ಅಭೈಥರ್ಿ ಮಾತನಾಡಿಸಿದಾಗ ಆತ ಖಾಸಗಿಯಾಗಿ ಹೇಳುತ್ತಿದ್ದ. 'ಮಾರಾಯ. ಈ ಸಾರಿ ಚುನಾವಣೆಗೆ ನಿಂತಿದೀನಿ ಮೊದಲ ಸಲ. ಕನಿಷ್ಟ 75 ಸಾವಿರ ಬೇಕು ಅನಿಸ್ತಿದೆ. ಖಚರ್ು ಮಾಡಿದ್ರು, ಅರಿಸಿ ಬಂದ್ರ ತೊಂದರೆ ಇಲ್ಲ'.
ಈ ತೊಂದರೆ ಇಲ್ಲ ಎಂಬ ಮಾತಿನಲ್ಲೆ ಎಲ್ಲ ಅಡಗಿದೆ. ಈಗಂತೂ ಒಂದು ಪಂಚಾಯತಿಗೆ ಪ್ರತಿ ವರ್ಷ ಸರಿ ಸುಮಾರು 30 ರಿಂದ 50 ಲಕ್ಷ ಹಣ ಹರಿದು ಬರುತ್ತದೆ. ಸ್ವಲ್ಪ ಡಿಸೆಂಟ್ ಆಗಿ ಗುಳುಂ ಗೊಳಿಸಿದರು ಒಂದೆರಡು ಲಕ್ಷ ಒಳಗೆ ಹಾಕಬಹುದು ಎನ್ನುವುದು ಆ 'ತೊಂದರೆಯಿಲ್ಲ' ಎನ್ನುವ ಮಾತಿನ ಮರ್ಮ.
ಆಡಳಿತ ವಿಕೇಂದ್ರಿಕರಣ ಆಡಳಿತಕ್ಕೆ ಸಹಾಯವಾಗುವ ಬದಲು ಹಣ ತಿನ್ನಲು ಹಾಗೂ ಮರಿ ರಾಜಕೀಯ ಪುಡಾರಿಗೆ ತನ್ನ ಭವಿಷ್ಯಕ್ಕೆ ಸಹಾಯವಾಗುತ್ತಿದೆ ಅನಿಸುತ್ತದೆ. ಆತ ಇದನ್ನು ಒಂದು ಪ್ಲಾಟ್ಫಾಮರ್್ ಮಾಡಿಕೊಂಡರೆ ಆಡಳಿತ ವಿಕೇಂದ್ರೀಕರಣ ಹಣ ತಿನ್ನಲು ಮಾತ್ರ ಸೀಮಿತಗೊಂಡುಬಿಡುತ್ತದೆ.
ಫುಲ್ ಸ್ಟಾಪ್: ಆಡಳಿತ ವಿಕೇಂದ್ರೀಕರಣವು ಲಂಚ ಹಾಗೂ ರಾಜಕೀಯ ಖದೀಮರ ವಿಕೇಂದ್ರೀಕರಣವಾಗುತ್ತಿದೆ. ಶಾಸಕನ ಜೊತೆ ಆತನ ಪಟಾಲಂಗು ಮೇಯಲು ಉತ್ತಮ ವೇದಿಕೆ.

Wednesday, May 05, 2010

'ಪ್ರಥ್ವಿ' ಮನವನ್ನು ಅಗೆಯುತ್ತದೆ

ಬಹಳಷ್ಟು ದಿನಗಳ ನಂತರ ಥೀಯೇಟರ್ ಕಡೆ ಮುಖ ಹಾಕಿದ್ದೆ. ತಂಗಿನೂ ಪಿಯುಸಿ, ಸಿಇಟಿ ಪರೀಕ್ಷೆ ತಲೆ ನೋವು ಮುಗಿಸಿ ಧಾರವಾಡಕ್ಕೆ ಬಂದಿದ್ದಳು. ಪುನೀತ್ ಅಭಿನಯದ 'ಪೃಥ್ವಿ' ಚಿತ್ರಕ್ಕೆ ಹೋಗಲು ನಿರ್ಧರಿಸಿದೆವು.
ಅದೇ ಚಿತ್ರ ನೋಡಬೇಕೆಂಬ ನಿಧರ್ಾರಕ್ಕೆ ಕಾರಣ ಗೊತ್ತಿಲ್ಲ. ಆದರೆ ಗಣಿ ಗಲಾಟೆಗೆ ಸಂಬಂಧ ವಿಷಯವೆಂಬುದು ಒಂದು ಇರಬಹುದು. ಸುಮಾರು ಎರಡು ತಿಂಗಳ ಹಿಂದೆ ಪ್ರತಾಪ್ ಸಿಂಹ ಅವರ 'ಮೈನಿಂಗ್ ಮಾಫಿಯಾ-ಇವರ್ಯಾರು ಗೊತ್ತೇನು, ಇವರ ಕಥೇ ಹೇಳಲೇನು' ಪುಸ್ತಕವನ್ನು ಒಂದೆ ಉಸಿರಿಗೆ ಓದಿ ಮುಗಿಸಿ, ಮನದ ಮೂಲೆಯಲ್ಲಿ ಪ್ರತಾಪ್ಗೊಂದು ಸಲಾಮು ಹೊಡೆದಿದ್ದೆ. 'ಪೃಥ್ವಿ' ಚಿತ್ರ ನೋಡಿದಾಗ ನನಗೆ ಜೇಕಬ್ ವಗರ್ೀಸ್ಗು ಒಂದು ಥ್ಯಾಂಕ್ಸ್ ಹೇಳೋಣ ಅನಿಸುತ್ತಿದೆ. ಚಿತ್ರ ನೋಡಿದ ಮೇಲೆ ಮೊದಲ ಬಾರಿಗೆ ಚಿತ್ರದ ಕಥೆ ಸಾಗುವ ರೀತಿ, ಛಾಯಾಗ್ರಹಣ, ಕೋರಿಯೋಗ್ರಫಿ, ಹಾಡು, ಸಂಭಾಷಣೆ ಇವ್ಯಾವುರತ್ತವು ಗಮನವಹಿಸಬೇಕು ಎಂದು ಅನಿಸುತ್ತಿಲ್ಲ.
ಇಡೀ ಚಿತ್ರ ಬಳ್ಳಾರಿ ಸುತ್ತವೇ ಗಿರಕಿ ಹೊಡೆಯುತ್ತ ಅಲ್ಲಿಯೇ ತೆರೆ ಕಾಣುತ್ತದೆ. ಎಷ್ಟು ಬೇಡ ಎಂದರು, ಮನವನ್ನು ಎಷ್ಟೆ ನಿಯಂತ್ರಿಸಿಕೊಂಡರು ಪ್ರತಿ ಬಾರಿಯೂ ಚಿತ್ರದ ವಿಲನ್ ಅವಿನಾಶ್ ಮತ್ತು ಪಡ್ಡೆಗಳನ್ನು ನೆನಸಿಕೊಂಡಾಗ ಜನಾರ್ಧನ ರೆಡ್ಡಿ ಮತ್ತು ಆತನ ಟಪಾಲಂ ನೆನಪಾಗುತ್ತಿದ್ದರು. ಅದಕ್ಕೆ ಒತ್ತು ನೀಡುವಂತೆ ಜೇಕಬ್ ವಗರ್ೀಸ್ ಈ ಕೆಳಗಿನ ಸಂಭಾಷಣೆಗಳನ್ನು ಒದಗಿಸುತ್ತಾರೆ.

'ಇವರ ಸರಕಾರ ಸುಭದ್ರ ಪಡಿಸೋಕೆ ಶಾಸಕರ ಖರೀದಿ ಮಾಡಲು ನಮ್ಮ ಹಣ, ಸಹಾಯ ಬೇಕು, ಆದರೆ ಒಬ್ಬ ಡಿಸಿ ತೆಗೆದು ಹಾಕಿ ಅಂದ್ರೆ ಅದು ನಿಮ್ಮ ಜಿಲ್ಲೆಯ ರಾಜಕೀಯ, ನೀವೆ ಬಗೆಹರಿಸಿಕೊಳ್ಳಿ ಎಂದು ಪುಂಗಿ ಊದ್ತಾರೆ. ಬೈ-ಇಲೆಕ್ಷನ್ ಆದ್ಮೇಲೆ ಈ ಸರಕಾರನಾ ಉರಳಿಸಿ ನಮ್ಮ ಭಟ್ರನ್ನಾ ಮುಖ್ಯಮಂತ್ರಿ ಮಾಡನಾ'
'ನನ್ನ ಕೈಲಿ ಸರಕಾರಾನೇ ಐತಿ, ಈ ಡಿಸಿ ಏನು ಮಹಾ'
'ಇಡೀ ದೇಶ ಪರಕೀಯರ ದಾಸ್ಯದಿಂದ 47ರಲ್ಲೇ ಮುಕ್ತಿ ಪಡೆದಿರಬಹುದು, ಆದರೆ ಬಳ್ಳಾರಿಯಿಂದಲ್ಲಾ'
'ಬಾಡಿಗೆ ಸೈಕಲ್ ಹೊಡಿಲಿಕ್ಕೂ ಗತಿ ಇಲ್ದೋರು ಇಂದು ಇಂಪೋಟೆಡ್ ಕಾರ್ ಹೊಂದಿದಾರೆ'

ಇವೆಲ್ಲದಕ್ಕೂ ಪೂರಕವೆಂಬಂತೆ ನಮ್ಮ 'ಮಣ್ಣಿನ ಮಗ' ಮಾಜಿ ಪ್ರಧಾನಿ ದೇವೆಗೌಡರು ಕೂಡ ಪ್ರತಿಯೊಬ್ಬರು ನೋಡಬೇಕಾದ ಚಿತ್ರ ಎಂದು ಪ್ರಮಾಣಪತ್ರ ನೀಡಿರುವಾಗ ಜನಾರ್ಧನನ ನೆನೆಯದೇ ಮತ್ಯಾರ ನೆನೆಯಲಿ.
ಚಿತ್ರ ಬಹಳಷ್ಟು ನಮ್ಮ ಮನವನ್ನು ಕದಡುತ್ತದೆ. ಕೆಲವೊಮ್ಮೆ ರೆಡ್ಡಿ ಬ್ರದರ್ಸ್ ಪಾತ್ರದಲ್ಲಿ ನಟರಿರುವ ಸಾಕ್ಷ್ಯಚಿತ್ರವೋ ಎಂದನಿಸುತ್ತದೆ. ಜೇಕಬ್ ವಗರ್ೀಸ್, ಪ್ರತಾಪ್ ಸಿಂಹ ಹಾಗೂ ಇನ್ನು ಕೆಲವೆ ಕೆಲವು ಮಾಧ್ಯಮ ಮಿತ್ರರು ಮಾತ್ರ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಉಳಿದವರಿಗೆ ಏನಾಗಿದೆ. ಅದೇ ಚಿತ್ರದಲ್ಲಿ ಬರುವ ಟಿವಿ-ಎನ್ (ವಿ.ಸೂ: ಟಿವಿ-ಎನ್ ಚಾನೆಲ್ನ ಲೋಗೊ ಹಾಗೂ ಇನ್ನಿತರ ಅಂಶಗಳು ಟಿವಿ-9 ಅನ್ನು ಹೋಲುವುದು ಕೌತುಕವೆನಿಸುತ್ತದೆ) ನ್ಯೂಸ್ ಚಾನೆಲ್ನಂತೆ ದಂಧೆಗಿಳಿದಿದ್ದಾರಾ?
ಚಿತ್ರದಲ್ಲಿ ಬರುವ ಸನ್ನಿವೇಷಗಳು ನಿಜವಾಗಿ ನಡೆದರೆ ಎಂಬ ಆಶಾ ಭಾವನೆ ಎಲ್ಲೋ ಮೂಡಿ ಮುಖ್ಯಮಂತ್ರಿ ಯಡಿಯೂರಪ್ಪ ನೆನಪಾದಾಗ ಎಲ್ಲೋ ಕಮರಿ ಹೋಗುತ್ತದೆ. ರಾಜ್ಯ ಸಚಿವನ ತಮ್ಮ ನಾಗೇಂದ್ರನನ್ನು ಡಿಸಿ ಪ್ರಥ್ವಿಕುಮಾರ್ ಮಣ್ಣಿನ ಹೊಂಡದಲ್ಲೆ ಹೂತು ಹಾಕಿದ ದೃಶ್ಯ ನೋಡಿದಾಗ ನನಗೆ ಮೊದಲು ಅನಿಸಿದ್ದು ಇದು ಆದಷ್ಟು ಬೇಗ ನೈಜವಾಗಲೆಂದು.

ಇಂತಹ ಗಣಿ ಧೂಳಿನ ಹಣ ಹೀಗೆ ರಾಜ್ಯದ ರಾಜಕೀಯ ನಿರ್ಧರಿಸುತ್ತ, ಯಾರೂ ಏನೆ ಬರೆದರು, ಏನೆ ಹೇಳಿದರೂ ಖ್ಯಾರೆ ಮಾಡದೆ ಮುನ್ನುಗ್ಗುತ್ತಿದ್ದರೆ ವಿಧಾನಸೌಧದಲ್ಲೂ ಗಣಿಗಾರಿಕೆ ಪ್ರಾರಂಭಿಸಿಯಾರು.
ಫುಲ್ ಸ್ಟಾಪ್: ಜೇಕಬ್ ವಗರ್ಿಸ್, ಪ್ರತಾಪ್ ಸಿಂಹರಂಥವರು ಗಣಿ ರೆಡ್ಡಿಗಳನ್ನು ವಿಲನ್ ಮಾಡಿದರೆ, ಇವರನ್ನು ಹಿರೋಗಳನ್ನಾಗಿಸುವ 'ದೊಡ್ಡ' ಪತ್ರಕರ್ತರು ಇದ್ದಾರೆ.

Monday, May 03, 2010

ಬದುಕು ಒಂದೆ ಇರಲಿ; ಎಲ್ಲವೂ ಎರಡಾದರೆ ಕಷ್ಟವಾದೀತು!


ಹಾಲಪ್ಪ ಎನ್ನೊ ಮನುಷ್ಯ ಇಂದು ರಾಜ್ಯಾದ್ಯಂತ ಸುದ್ದಿಯಾಗಿದ್ದಾನೆ. ಬಿಜೆಪಿ ಹಾಗೂ ಸರಕಾರಕ್ಕೆ ಹಾಲಾಹಲವಾಗಿ ಪರಿಣಮಿಸಿರುವುದು ಪ್ರತಿಯೊಬ್ಬರು ತಿಳಿದ ವಿಷಯ. ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೂ 'ಹಾಲ'ಪ್ಪನಿಗೆ 'ಛೀ... ಥೂ...' ಅಭಿಷೇಕ ಮಾಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಕೆಲ ಬುದ್ಧಿವಂತರು ಇದು ಮೀಡಿಯಾ ಕ್ರಿಯೇಷನ್ ಎಂದು ಜರಿಯುತ್ತಿದ್ದಾರೆ. ಇನ್ನೂ ಕೆಲವರು ಮತ್ತಷ್ಟು ತಮ್ಮ ಸಾಚಾತನ ತೋರಿಸಿದವರು ಇದ್ದಾರೆ.
'ಅಲ್ಲಾ ಸ್ವಾಮಿ ಹಾಲಪ್ಪ, ಸ್ವಾಮಿ ನಿತ್ಯಾನಂದ ಇವರ ವೈಯಕ್ತಿಕ ಜೀವನ ಕೆದಕುವ ಹಕ್ಕು ಯಾವ ಮಾಧ್ಯಮಕ್ಕು ಇಲ್ಲ. ಪ್ರತಿಯೊಬ್ಬರು ಅವರವರ ಖಾಸಗಿ ಬದುಕು ಹೊಂದಿರುತ್ತಾರೆ. ನಮ್ಮ ಸಂವಿಧಾನವು ಅದನ್ನೆ ಹೇಳುತ್ತದೆ. ಇವರನ್ನು ಹಾಗೆ ಬಿಟ್ಟರೆ ನಾಳೆ ಬೆಡ್ರೂಮಿನಲ್ಲೂ ಸ್ಪೈ ಕ್ಯಾಮರಾ ಇಡುತ್ತಾರೆ' ಎಮದು ಭಾಷಣ ಬಿಗಿಯುತ್ತಾರೆ. ಇದಕ್ಕೆ ಸಮಝಾಯಿಷಿ ನೀಡಲು ಓರಿಸ್ಸಾದ ಮಾಜಿ ಮುಖ್ಯಮಂತ್ರಿ ಬಿ.ಜೆ.ಪಟ್ನಾಯಕ್ ಸಂಬಂಧ ಸುಪ್ರೀಂ ಕೋಟರ್್ ಆದೇಶದ ಉಲ್ಲೇಖ ಬೇರೆ.
ಹೌದು ಸವರ್ೋಚ್ಛ ನ್ಯಾಯಾಲಯ ಬೇರೊಬ್ಬರ ಸಾರ್ವಜನಿಕ ಬದುಕಿನಲ್ಲಿ ಮೂಗು ತೂರಿಸುವ ಅಧಿಕಾರ ಮಾಧ್ಯಮಕ್ಕಿಲ್ಲ ಎಂದು ಸಾರಾಸಗಟಾಗಿ ಮಾದ್ಯಮಗಳಿಗೆ ಎಚ್ಚರಿಕೆ ನೀಡಿದೆ. ಸವರ್ೋಚ್ಛ ಪೀಠವು ದಶಕಗಳ ಹಿಂದೆ ಈ ತೀಪರ್ು ನೀಡುವಾಗ ನಮ್ಮ ಹೆಚ್ಚಿನ ಜನ ನಾಯಕ(ಸೇವಕ)ರಿಗೆ, ಸಾರ್ವಜನಿಕ ವ್ಯಕ್ತಿಗಳಿಗೆ ಖಾಸಗಿ ಹಾಗೂ ಸಾರ್ವಜನಿಕ ಜೀವನ ಎಂಬ ಎರಡು ಮುಖಗಳಿರಲಿಲ್ಲ. ಖಾಸಗಿಯಾಗಿ ಹೇಗೆ ಬದುಕುತ್ತಿದ್ದರೋ ಹಾಗೇ ಸಾರ್ವಜನಿಕವಾಗಿ ನುಡಿಯುತ್ತಿದ್ದರು. ಸಾರ್ವಜನಿಕವಾಗಿ ಹೇಗೆ ನುಡಿಯುತ್ತಿದ್ದರೋ ಹಾಗೇ ಬದುಕುತ್ತಿದ್ದರು.
ಈ ಎರಡು ಪ್ರಮೇಯದ ಜೀವನ ಶೈಲಿ ಭಾರತೀಯರ ಪಾಲಿಗೆ 21 ನೇ ಶತಮಾನದ ಪ್ರಥಮ ದಶಕದ ಬಹು ದೊಡ್ಡ ಕೊಡುಗೆ. ಸಮಾಜವಾದ, ಕಮ್ಯುನಿಸಮ್, ರಾಷ್ಟ್ರೀಯವಾದಗಳನ್ನು ಪುಸ್ತಕದಲ್ಲಿ ಬರೆಯುತ್ತ, ವೇದಿಕೆ, ಚಾನೆಲ್ಗಳ ಎದುರು ಒದರುತ್ತಾ ಐಷರಾಮಿ ಬಂಗಲೆಗಳಲ್ಲಿ ಹೈಟೆಕ್ ಜೀವನ ನಡೆಸಲಾರಂಭಿಸಿದರು. ಹೇಳುವುದಕ್ಕು, ಮಾಡುವದಕ್ಕು ಸಂಬಂಧದ ಕೊಂಡಿಯೇ ಕಳಚಿ ಹೋಯಿತು.
ಮೊದಲು ತಿಳಿದುಕೊಂಡುಬಿಡೋಣ. ನಾವಿರುವುದು ಭಾರತ ದೇಶದಲ್ಲಿ. ಅಮೇರಿಕಾದಲ್ಲಿ ಅಲ್ಲ. ಅಲ್ಲಿಯ ನಾಯಕರಿಗೆ ಹಲವಾರು ಬದುಕುಗಳಿರಬಹುದು. ಅಲ್ಲಿಯ ಅಧ್ಯಕ್ಷ ಎಷ್ಟು ಗೆಳತಿಯರೊಡನೆ ಚಕ್ಕಂದವಾಡಿದರು ಅದರ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಆದರೂ ಕ್ಲಿಂಟನ್ ವಿಷಯ ಏಕೆ ಬಿಗಡಾಯಿಸಿತೆಂದರೆ ಅದು ಅವರ ದುರ್ವರ್ತನೆಯಿಂದ. ಇಂತಹುದೇ ಪಾಲಸಿಗಳನ್ನು ನಮ್ಮ ಸಾರ್ವಜನಿಕ ವ್ಯಕ್ತಿಗಳಿಗೆ ಹೋಲಿಸುವುದು ಅಸಾಧ್ಯ. ನಾವು ಕೆಲವು ಆರೋಗ್ಯಕರ ಸಾಮಾಜಿಕ ಕಟ್ಟಳೆ ಹೊಂದಿದ್ದೇವೆ.
ನಾವೆಂದು ಸಾರ್ವಜನಿಕವಾಗಿ ಒಂದು ಹೆಂಡತಿ ಹಾಗೂ ಖಾಸಗಿಒಯಾಗಿ ಮತ್ತೊಂದು ಹೆಂಡತಿಯನ್ನು ಒಪ್ಪುವುದಿಲ್ಲ. ಅದರಲ್ಲೂ ಒಬ್ಬ ವ್ಯಕ್ತಿ ಸಾರ್ವಜನಿಕ ಗೌರವವನ್ನು ಗಳಿಸುತ್ತಿರುವವನು ಇಂತಹ ಕಾರ್ಯಕ್ಕೆ ಇಳಿದರೆ ಯಾರೂ ಕ್ಷಮಿಸಲಾರರು.
ಸ್ವಾಮಿ ನಿತ್ಯಾನಂದನಿರಬಹುದು ಅಥವಾ ಹರತಾಳ ಹಾಲಪ್ಪ ಇರಬಹುದು. ಅವರೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ಯಾರೂ ಕೂಡ ಅದರತ್ತ ಗಮನವಹಿಸುವ ಅವಶ್ಯಕತೆಯಿರಲಿಲ್ಲ. ನ್ಯಾಯ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳುತ್ತಿತ್ತು. ಆದರೆ ಈ ಮೇಲಿನ ಇಬ್ಬರು ಖದೀಮರು ಲಕ್ಷಾಂತರ ಜನರ ಪ್ರತಿನಿಧಿಗಳೆಂದು ಕರೆಯಿಸಿಕೊಳ್ಳುತ್ತಿರುವವರು. ಯಾವುದೇ ಜನ ಸಾಮಾನ್ಯ ಒಬ್ಬ ರೇಪಿಸ್ಟ್ ಮಿನಿಸ್ಟರ್ ತನ್ನ ನಾಯಕ ಎಂದು ಹೇಳಿಕೊಳ್ಳಲಾರ.
ಇಂತಹ ಕಾಮುಕರನ್ನು ಸಾರ್ವಜಕನಿಕ ಪ್ರದರ್ಶನಕ್ಕಿಡುವುದೇ ತಪ್ಪೆಂದಾದರೆ ಮಾಧ್ಯಮ ಇನ್ನೇನು ಮಾಡಬೇಕು. ಹಾಗಾದರೆ ಅದನ್ನು ತೆರೆಗೆ ತರದೇ ಅಂತಹ ಮಂತ್ರಿ ಸಾರ್ವಜನಿಕವಾಗಿ ದಾದಾಗಿರಿ ಮಾಡುತ್ತಿರುವದನ್ನು ನೋಡುತ್ತಾ ಕೂರಬೇಕೆ. ಚೋರ ಸ್ವಾಮಿಗಳು ಆಸ್ತಿ ಮೇಲೆ ಆಸ್ತಿ ಮಾಡುವದನ್ನು ನೋಡಿ ಎಂಜಾಯ್ ಮಾಡಬೇಕೆ?
ಮಾಧ್ಯಮಗಳು ವಿಷಯವನ್ನು ಸೆನ್ಸೇಷನ್ ಮಾಡುತ್ತವೆ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಮಾಡುವುದೆಲ್ಲ ತಪ್ಪು ಎಂದು ಸಾರುವುದು ಸೂಕ್ತವಲ್ಲ. ಎಲ್ಲ ತಪ್ಪುಗಳನ್ನು ಮಾಧ್ಯಮದ ಮೇಲೆ ಹಾಕಿ ನಾವು ಸಾರ್ವಜನಿಕರು ಮೂಕ ಪ್ರೇಕ್ಷರಾಗುವುದು ಎಷ್ಟು ಸೂಕ್ತ.
ಆಯಿತು ಇಂತಹ ವಿಷಯಗಳನ್ನು ಬಿಟ್ಟು ಜನಪರ ವಿಷಯಗಳಾದ ಬಳ್ಳಾರಿ ಗಣಿ ಮಾಫಿಯಾ, ಕಾಮೆಡ್-ಕೆ ಹಗರಣ, ನೈಸ್ ವಿವಾದ ಇನ್ನಷ್ಟು ಪ್ರಕರನಗಳ ಮೇಲೆ ಕಣ್ಣು ಹಾಯಿಸಿದಾಗ ಜನರು ಯಾವ ಮಟ್ಟದಲ್ಲಿ ಪ್ರತಿಕ್ರಿಯಿಸಿದರು. ಮನೆಯಲ್ಲೊ, ಮತ್ತೆಲ್ಲೊ ಒಮ್ಮೆ ಹರಟಿ ತಮ್ಮ ಕೆಲಸದಲ್ಲಿ ನಿರತರಾದರು. ಆಗ ಸಾಮಾನ್ಯವಾಗಿ ಮೀಡಿಯಾ ಸೆನ್ಸೇಷನಲಿಸಂ ಕಡೆ ವಾಲಲೇಬೇಕಾಗುತ್ತದೆ. ಬದುಕಿಗೋಸ್ಕರ, ಏಕೆಂದರೆ ಸಾರ್ವಜನಿಕರ ನೆನಪು ಅಷ್ಟೊಂದು ಶಾಟರ್್ ಆದಾಗ.
ಇಂತಹ ಸಾಮಾಜಿಕ ವಿಷಯ ಬಂದಾಗ ಮಾಧ್ಯಮಗಳನ್ನು ಬೈಯುತ್ತಾ ಕೂರುವ ಬದಲು ನೀವು, ನಾವು ಏನು ಮಾಡಬಹುದು ಎಂದು ಆಲೋಚಿಸೋಣ. ಮಾಧ್ಯಮವನ್ನು ಬೈಯುತ್ತ ವಿಷಯದ ಗಂಭೀರತೆ ಹಾಳು ಮಾಡುವುದು ಬೇಡ.
ಫುಲ್ ಸ್ಟಾಪ್: ಒಬ್ಬ ವ್ಯಕ್ತಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಮೇಲೆ ಅವನದೇ, ಮನೆಯ ಅವನದೇ ಬೆಡ್ರೂಮಿನಲ್ಲಿದ್ದಾಗ ಮಾತ್ರ ಆತನ ಬದುಕು ಖಾಸಗಿಯಾಗಿರುತ್ತದೆ. ಉಳಿದೆಲ್ಲವು ಸಾರ್ವಜನಿಕವೇ.

ನಿರ್ಲಕ್ಷಕ್ಕಿಂತ ಬೇರೊಂದು ನಿರ್ಲಜ್ಜತನವಿಲ್ಲ

ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಬಡ ಮಕ್ಕಳಿಗಾಗಿಯೇ ರತ್ನಮಾನಸ ಎನ್ನುವ ಶಾಲೆ ನಡೆಸುತ್ತಿದೆ. ಅಲ್ಲಿ ಐದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಪಾಠ ಮಾಡಲಾಗುತ್ತದೆ. ನಾನು ಮೂರು ವರ್ಷ ಉಜಿರೆಯಲ್ಲಿ ಡಿಗ್ರಿ ಮಾಡುತ್ತಿದ್ದಾಗ ಇಲ್ಲಿನ ವಿದ್ಯಾಥರ್ಿಗಳನ್ನು ವಿಶೇಷವಾಗಿ ಗಮನಿಸುತ್ತಿದ್ದೆ. ಅಲ್ಲಿನ ವಿದ್ಯಾಥರ್ಿಗಳು ಕೃಷಿ, ವ್ಯವಹಾರ, ಹೈನುಗಾರಿಕೆ, ಬ್ಯಾಂಕಿಂಗ್ ಹೀಗೆ ಇನ್ನು ಅನೇಕ ವಿಷಯಗಳ ತಾವೇ ಸ್ವತಃ ಪ್ರಯೋಗ ಮಾಡುತ್ತಿದ್ದರು. ಈ ಅಂಶಗಳು ನನ್ನನ್ನು ಬಹಳವಾಗಿ ಕಾಡುತ್ತಿದ್ದವು.
ಅದರಲ್ಲೂ ಅವರು ನಡೆಸಿಕೊಂಡು ಬರುತ್ತಿದ್ದ ಸ್ವ-ಸಹಕಾರಿ ಸಂಘದಿಂದ ನಾನು ಆಕಷರ್ಿತಗೊಂಡಿದ್ದೆ. ವಿದ್ಯಾಥರ್ಿಗಳು ಪ್ರತಿ ವರ್ಷ ಪ್ರಾಥಮಿಕವಾಗಿ ಇಷ್ಟು ಹಣ ಅಂತ ಅಲ್ಲಿ ತೊಡಗಿಸುತ್ತಿದ್ದರು. ನಂತರ ಅವರ ವಾಷರ್ಿಕ ಅವಶ್ಯ ಪಠ್ಯ-ಪುಸ್ತಕ, ಪೆನ್ನು, ಪೇಪರ್, ಕೆಲ ತಿಂಡಿಗಳನ್ನು ವಿದ್ಯಾಥರ್ಿಗಳ ಸಂಘವೇ ಮಾರುತ್ತಿತ್ತು. ಮಾರಾಟಕ್ಕಾಗಿ ಅವರು ವಿದ್ಯಾಥರ್ಿಗಳ ಗುಂಪನ್ನು ರಚಿಸಿದ್ದರು. ಮಾರುಕಟ್ಟೆಯಿಂದ ವಸ್ತುಗಳನ್ನು ತಂದು, ಮಾರಿ, ಅದರ ಲೆಕ್ಕಪತ್ರ ಪರಿಶೀಲನೆ ಕೂಡ ವಿದ್ಯಾಥರ್ಿಗಳದ್ದೆ ಜವಾಬ್ದಾರಿ. ನಂತರ ಇಲ್ಲಿಯ ಲಾಭದಿಂದ ಬಂದ ಹಣವನ್ನು ಯಾವುದೋ ಹಬ್ಬದ ಆಚರಣೆಗೆ ಉಪಯೋಗಿಸಿಕೊಳ್ಳುತ್ತಿದ್ದರು.
ಇದರಲ್ಲಿ ಏನು ವಿಶೇಷತೆ ಇದೆ. ನಮ್ಮ ಹಳ್ಳಿಗಳಲ್ಲಿ ಕೆಲ ಮಕ್ಕಳೆ ಅಂಗಡಿ ನಡೆಸುತ್ತಾರೆ ಎಂದು ಕೆಲ ನಿರಾಶಾವಾದಿಗಳು ಮೂಗು ಮುರಿಯಬಹುದು. ಆದರೆ ಸಂಘದ ಹಿಂದೆ ಎಂಥ ಮುಂದಾಲೋಚನೆ ಇದೆ. ವಿದ್ಯಾಥರ್ಿಗಳಲ್ಲಿ ವ್ಯವಹಾರದ ಜ್ಞಾನ ಯಾವ ಮಟ್ಟದಲ್ಲಿ ಬೆಳೆಯುತ್ತದೆ. ಲೆಕ್ಕಾಚಾರದಲ್ಲಿ ಎಷ್ಟು ಪ್ರೌಢರಾಗಿರುತ್ತಾರೆ ಎಂದು ತಿಳಿಯಬೇಕಾದರೆ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಒಮ್ಮೆ ನೋಡಿ. ಇಷ್ಟಕ್ಕೂ ನಾನು ಇದನ್ನು ನಿಮಗೆ ಹೇಳುತ್ತಿರುವುದು ಆ ಶಾಲೆಯ ಪ್ರಚಾರಕ್ಕಲ್ಲ.
ಉತ್ತರ ಕನ್ನಡ ಸಹಕಾರಿ ಕ್ಷೇತ್ರಕ್ಕೆ ಹೆಸರುವಾಸಿಯಾದ ಜಾಗ. ನಾವೂ ಏಕೆ ನ್ಮಮ ಶಾಲೆಗಳಲ್ಲಿ ಇಂತಹ ವ್ಯವಸ್ಥೆಯನ್ನೇಕೆ ಜಾರಿಗೊಳಿಸಬಾರದೆಂಬ ಆಶಯವಷ್ಟೆ. ಇಂತಹ ಕಾರ್ಯಗಳು ಕಾನೂನಾದರೆ ಯಶಸ್ವಿಯಾಗಲ್ಲ. ಸ್ವ ಆಸಕ್ತಿಯಿಂದ ಆಗಬೇಕಷ್ಟೆ.
ಇಂದು ಪ್ರತಿಯೊಬ್ಬ ವಿದ್ಯಾಥರ್ಿಗು ಪಠ್ಯ ಪುಸ್ತಕ, ಚೀಲ, ಪೆನ್ನು, ಪೆನ್ಸಿಲ್, ಕಂಪಾಸ್ ಹಾಗೂ ಇನ್ನಿತರ ಕಲಿಕಾ ಸಾಮಗ್ರಿಗಳು ಬೇಕೆ ಬೇಕು. ಇವುಗಳನ್ನು ಎಲ್ಲ ವಿದ್ಯಾಥರ್ಿಗಳು ಅದೇ ರತ್ನಮಾನಸದ ಮಾದರಿಯಲ್ಲಿ ಒಂದು ಸಂಘ ಮಾಡಿ ಏಕೆ ಇವುಗಳನ್ನು ಮಾರಬಾರದು. ಹೀಗೆ ಹೇಳಿದ ತಕ್ಷಣ ಕೆಲ ಪಾಲಕರು ನಮ್ಮ ಮಕ್ಕಳಿಗೆ ಅಂತಹ ಅನಿವಾರ್ಯತೆ ಎದುರಾಗಿಲ್ಲ ಎಂದು ಹೇಳಬಹುದು. ಆದರೆ ಸ್ನೇಹಿತರೇ ಅವರು ಹಣದ ಬೆಲೆ, ಮಾರುಕಟ್ಟೆಯ ಪರಿಸ್ಥಿತಿಯನ್ನು ಅರಿಯಲು ಇದೊಂದು ಉತ್ತಮ ವೇದಿಕೆಯಾದೀತು.
ಇವೆಲ್ಲದರ ಮಧ್ಯೆ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅದೆಷ್ಟೋ ಮಕ್ಕಳು ಶಾಲೆಯ ಸಾಮಾನ್ಯ ಫೀಯನ್ನು ತುಂಬಲಾಗದೇ, ಪಠ್ಯ ಪುಸ್ತಕ ಖರೀದಸಲಾಗದೇ ಶಾಲೆಗಳನ್ನು ಮಧ್ಯದಲ್ಲಿಯೇ ಬಿಡುವಂತಹ ಪರಿಸ್ಥಿತಿಯಲ್ಲಿರುತ್ತಾರೆ. ಇಂತಹ ವಿದ್ಯಾಥರ್ಿ ಸಂಘ ಗಳಿಸಿದ ಲಾಭದ ಹಣವನ್ನೇಕೆ ಇಂತಹ ಒಬ್ಬ ವಿದ್ಯಾಥರ್ಿಗೆ ನೀಡಿದರು ಕೂಡ ವಿದ್ಯಾದಾನ ಮಾಡಿದಂತಹ ಶ್ರೇಷ್ಟ ಪುಣ್ಯ ನಿಮ್ಮದಾಗುತ್ತದೆ. ನಿಮ್ಮ ಸಹಾಯವನ್ನು ಎಂದು ಮರೆಯದ ಒಬ್ಬ ಸ್ನೇಹಿತ ಅಥವಾ ಸ್ನೇಹಿತೆ ಖಂಡಿತಾ ನಿಮಗೆ ದೊರಕುತ್ತಾಳೆ. ಇದಕ್ಕಿಂತ ಖುಷಿ ನಮಗೆ ಮತ್ತೆಲ್ಲೂ ದೊರಕಲಾರದು ಗೆಳೆಯರೆ.
ಎಲ್ಲ ವಿದ್ಯಾಥರ್ಿಗಳು ಕಲಿಕಾ ಸಾಮಗ್ರಿಗಳನ್ನಂತು ಖರೀದಿಸಲೇಬೇಕು. ಅದರ ಲಾಭ ಮತ್ಯಾರಿಗೋ ತಲುಪುತ್ತದೆ. ಅದು ಒಂದು ಸ್ವಾಸ್ಥ್ಯ ವಿದ್ಯಾಥರ್ಿ ಸಮುದಾಯವನ್ನೆ ತಲುಪಿದರೆ ಅದರಲ್ಲಿ ಏನು ತಪ್ಪಿದೆ.
ಸರಕಾರ ಇಂದು ಬಡ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಏನೇನೋ ಸಾಹಸ ಮಾಡುತತಿದೆ. ಆದರೆ ಬ್ರಷ್ಟಾಚಾರ ಹಾಗೂ ಇನ್ನೂ ಅನೇಕ ಕಾರಣಗಳಿಂದ ಯೋಜನೆಗಳು ಮಣ್ಣು ಮುಕ್ಕುತ್ತಿವೆ. ಆದರೆ ಇಂತಹ ಸಾಮುದಾಯಿಕ, ಸಂಘಟಿತ ಪ್ರಯತ್ನಗಳಿಂದ ಸರಕಾರ ಹಾಗೂ ಬಡವರಿಗೆ ನಾವು ಕೈ ಜೋಡಿಸಬಹುದು.
ಈ ವ್ಯವಸ್ಥೆ ಕೂಡ ಸರಕಾರದಿಂದಲೆ ಬರಬೇಕೆಂಬ ಜಡತ್ವವಿದ್ದರೆ ಏನು ಮಾಡಲು ಸಾಧ್ಯವಿಲ್ಲ. ಸರಕಾರ ಇಂತಹ ವ್ಯವಸ್ಥೆ ಮಾಡಲು ಅಸಾದ್ಯ. ಮಾಡಿದರು ಅದೊಂದು ಹೆಗ್ಗಣದ ವಾಸ ಸ್ಥಾನವಾಗುತ್ತದೆ. ಇದರಲ್ಲಿ ಸರಕಾರದ ಹಸ್ತಕ್ಷೇಪವೇ ಬೇಡ. ಪಾಲಕರು,, ಶಿಕ್ಷಕರು ಹಾಗೂ ವಿದ್ಯಾಥರ್ಿಗಳು ಮನಸ್ಸು ಮಾಡಿದರೆ ಇದನ್ನು ಸಾಧಿಸಬಹುದು. ಬದಲಾವಣೆಗೆ ಅಣಿಯಾಗೋಣ, ಇಂದೆ ಮೊದಲ ಹೆಜ್ಜೆ ಇಡೋಣ.
ನಿರ್ಲಕ್ಷಕ್ಕಿಂತ ಬೇರೊಂದು ನಿರ್ಲಜ್ಜತನವಿಲ್ಲ.

Saturday, April 24, 2010

ಶಿಕ್ಷಣದ ಕಾರ್ಖಾನೆ ಬೇಡ ನಮಗೆ

'ಉತ್ತರ ಕನ್ನಡದ ಜನತೆ ಬಹಳ ಬುದ್ಧಿವಂತರು. ಶೈಕ್ಷಣಕವಾಗಿ ಬಹಳಷ್ಟು ಮುಂದುವರೆದಿದ್ದಾರೆ' ಎಂಬಂತಹ ಬಹಳಷ್ಟು ಮಾತುಗಳನ್ನು ನಾವು ಬೇರೆಯವರಿಂದ ಕೇಳಿದಾಗ ಸಾಕಷ್ಟು ಖುಷಿ ಪಡುತ್ತೇವೆ. ಈಗ ಮತ್ತಷ್ಟು ಖುಷಿ ಏಕೆಂದರೆ ನಮ್ಮ ಜಿಲ್ಲೆಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಶಿಕ್ಷಣ ಸಚಿವರು.
ಇಷ್ಟಾದರೂ ಈ ಜಿಲ್ಲೆಯ ಬಹುತೇಕ ವಿದ್ಯಾಥರ್ಿಗಳಿಗೆ ಪ್ರೌಢ ಶಿಕ್ಷಣ ಮುಗಿದ ಕೂಡಲೇ ತಾನು ಯಾವ ಕಾಲೇಜು ಸೇರಲಿ ಎಂಬ ಆತಂಕ ಮೂಡಲಾರಂಬಿಸುತ್ತದೆ. ಜಿಲ್ಲೆಯಲ್ಲಿ 30ಕ್ಕೂ ಅಧಿಕ ಕಾಲೇಜುಗಳಿದ್ದರೂ ಕೂಡ ಇಲ್ಲಿಯ ಶಿಕ್ಷಣ ಗುಣಮಟ್ಟದ ಬಗ್ಗೆ ಮಕ್ಕಳು ಹಾಗೂ ಪಾಲಕರಲ್ಲಿ ಆತಂಕ ಕಾಡುತ್ತಿದೆ. ಈ ಆತಂಕದ ಪರಿಣಾಮವಾಗಿ ದುಡ್ಡಿದ್ದವರ ಮಕ್ಕಳು ದಕ್ಷಿಣ ಕನ್ನಡದ ಪ್ರತಿಷ್ಠಿತ ಕಾಲೇಜಿನ ಕಡೆ ಮುಖ ಮಾಡಿದರೆ, ಉಳಿದವರು ಅನಿವಾರ್ಯವಾಗಿ ಸ್ಥಳೀಯ ಕಾಲೇಜುಗಳನ್ನೇ ಅವಲಂಬಿಸಬೇಕಾಗಿದೆ.
ಇದರರ್ಥ ಇಲ್ಲಿಯ ಕಾಲೇಜುಗಳು ಸಮರ್ಪಕವಾಗಿಲ್ಲವೆಂದಲ್ಲ. ಆದರೆ ಇಲ್ಲಿಂದ ಹೊರಬರುತ್ತಿರುವ ಸಾಮಾನ್ಯ ವಿದ್ಯಾಥರ್ಿಗಳು ಸ್ಪಧರ್ಾತ್ಮಕ ಜಗತ್ತಿಗೆ ಹೊಂದಿಕೆಯಾಗುತ್ತಿಲ್ಲ ಎಂಬುದು ಬಹುತೇಕರ ವಾದ. ಇದಕ್ಕೆ ದೊಡ್ಡ ಕಾರಣ ಜಿಡ್ಡುತನ ಹಾಗೂ ಕಂಜೂಸಿತನವನ್ನೇ ಮೈಗೂಡಿಸಿಕೊಂಡಿರುವ ಕಾಲೇಜು ಆಡಳಿತ ಮಂಡಳಿ ಹಾಗೂ ಸರಕಾರದ ನಿಲುವುಗಳು.
ಪ್ರಸಕ್ತ ಶೈಕ್ಷಣಿಕ ಯುಗದಲ್ಲಿ ಒಬ್ಬ ವಿದ್ಯಾಥರ್ಿ ತನ್ನ ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜು ಉಪನ್ಯಾಸಕನಾಗುವ ಹೊತ್ತಿಗೆ ಲಕ್ಷಾಂತರ ಹಣ ವ್ಯಯಿಸಿರುತ್ತಾನೆ. ಆ ಸಂದರ್ಭದಲ್ಲಿ 4-5 ಸಾವಿರ ಸಂಬಳ ನೀಡಿದರೆ ಆತನ ಪರಿಸ್ಥಿತಿ ಏನಾಗಬೇಕು. ಸಾಮಾನ್ಯವಾಗಿ ಪ್ರತಿಭಾವಂತರು ಬೇರೆ ಕಡೆ ಹೋಗಿಬಿಡುತ್ತಾರೆ. ಅಳಿದುಳಿದ ಅನಿವಾರ್ಯತೆ ಹೊಂದಿರುವ ಇನ್ನಿತರ ಪ್ರತಿಭಾವಂತ ಉಪನ್ಯಾಸಕರು ಕಾಲೇಜಿನಲ್ಲಿ ಪಾಠವನ್ನು ನೆಮ ಪೂತ್ರ್ಯಕ್ಕೆ ಮಾಡಿ, ಟ್ಯೂಷನ್ ಎಂಬುದನ್ನೆ ಶಾಶ್ವತ ದಂಧೆಯನ್ನಾಗಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಕಾಲೇಜು ಆಡಳಿತ ಮಂಡಳಿ ನೀಡುವ ಸಂಬಳದಿಂದ ಗಂಜಿ ತಿನ್ನುವುದು ಕಷ್ಟವಾದೀತು.
ಇವೆಲ್ಲಾ ಕಾರಣಗಳಿಂದ ಗುಣಮಟ್ಟ ನಿರೀಕ್ಷಿಸುವುದು ಧುರಂತವಾದೀತು. ಇದಕ್ಕೆ ತುಪ್ಪ ಸವರಿದಂತೆ ಕಳೆದ 10 ವರ್ಷದಿಂದ ಸರಕಾರವು ಕೂಡ ಉಪನ್ಯಾಸಕರ ನೇಮಕವನ್ನು ಕಡಿಮೆ ಮಾಡುತ್ತಿದೆ. ಆದರೆ ಪ್ರತಿ ವರ್ಷ ಹತ್ತಾರು ಸರಕಾರಿ ಕಾಲೇಜುಗಳನ್ನು ತೆರೆಯುತ್ತಿದೆ. ಒಂದು ವಿಷಯ ಒಪ್ಪಿಕೊಳ್ಳೋಣ, ಸರಕಾರಿ ಕಆಲೇಜುಗಳಿಂದ ಬಡ ವಿದ್ಯಾಥರ್ಿಗಳಿಗೆ ಕಡಿಮೆ ಹಣದಲ್ಲಿ ಪದವಿ ಹಾಗೀ ಇನ್ನಿತರ ಪ್ರಮಾಣ ಪತ್ರಗಳು ದೊರಕುತ್ತವೆ. ಆದರೆ ತಲೆಯಲ್ಲಿ ಏನೂ ತುಂಬದೆ ಕೇವಲ ಆ ಪ್ರಮಾಣ ಪತ್ರ ನೀಡಿ ಅಂತಹ ಪದವೀಧರರನ್ನು ನಿರುದ್ಯೋಗಿಗಳ ಸಾಲಿಗೆ ಏನೆಕ್ಕೆ ಸೇರಿಸುತ್ತೀರಿ.
ಆಡಳಿತ ಯಂತ್ರಕ್ಕೆ ಒಂದು ಸೂಕ್ಷ್ಮ ಮನವಿಯೆಂದರೆ ಓಟಿಗಾಗಿ ಕಾಲೇಜುಗಳನ್ನು ಪದೇ ಪದೇ ತೆರೆಯುತ್ತಾ ನಿರುದ್ಯೋಗಿಗಳ ಕಾಖರ್ಾನೆಯಾಗಿಸುವುದರ ಬದಲು ಈಗಿರುವ ಕಾಲೇಜುಗಳ ಗುಣಮಟ್ಟ ಹೆಚ್ಚಿಸಿ. ಸ್ಥಳೀಯ ವಿದ್ಯಾಥರ್ಿಗಳು ಬೆಂಗಳೂರು, ಮಂಗಳೂರು ವಿದ್ಯಾಥರ್ಿಗಳೊಡನೆ ಎಲ್ಲ ವಿಭಾಗದಲ್ಲೂ ಸ್ಪಧರ್ಿಸುವಂತೆ ವೇದಿಕೆ ನಿಮರ್ಿಸಿಕೊಡಿ. ಹೊಸ ಕಾಲೇಜು ನಿಮರ್ಾಣದ ಹೆಸರಲ್ಲಿ ವಿದ್ಯಾಥರ್ಿಗಳನ್ನು ದೊಡ್ಡ ಖೆಡ್ಡಾಗಳಿಗೆ ಕೆಡಗಬೇಡಿ. ಹೊಸ ಕಾಲೇಜು ಸ್ಥಾಪನೆಗೆ ನೀಡುವ ಅನುದಾನವನ್ನೇ ಈಗಿರುವ ಕಾಲೇಜಿನ ಅಭಿವೃದ್ಧಿಗೆ ನೀಡಿ. ಇದರೊಡನೆ ಆಡಳಿತ ಮಂಡಳಿಗಳು ತಮ್ಮ ಬೊಕ್ಕಸವನ್ನು ಸ್ವಲ್ಪ ಮಟ್ಟಿಗೆ ಬಿಚ್ಚಲು ಪ್ರಾರಂಭಿಸಿದರೆ ಒಳ್ಳೆಯದು.
ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಉತ್ತರ ಕನ್ನಡ ಶೈಕ್ಷಣಿಕವಾಗಿ ಇನ್ನಷ್ಟು ಮುಂದುವರೆಯಲು ಅವಕಾಶವಿದೆ. ಇಲ್ಲಿಯ ವಾತಾವರಣವೂ ಉತ್ತಮವಾಗಿದೆ. ಉತ್ತರ ಕನ್ನಡದ ಬಹುತೇಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವ್ಯವಸ್ಥೆ ಸರಕಾರದ ಅಡಿಯಲ್ಲಿದ್ದರೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ನಂತರದ ಶಿಕ್ಷಣ ನಾಗರೀಕರ ವಿಶ್ವಾಸ ಗಳಿಸಿಲ್ಲ. ಆದರೆ ಸರಕಾರ ಅಥವಾ ಇಲ್ಲಿನ ಸಂಘ ಸಂಸ್ಥೆಗಳು ಉತ್ತಮ ಶಿಕ್ಷಣ ಸಂಸ್ಥೆ ರೂಪಿಸಲು ವಿಫಲವಾಗುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತಿಸಲೇಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮಲ್ಲಿನ ಸಹಕಾರಿ ಸಂಸ್ಥೆಗಳು ಚಿಂತಿಸಬಹುದೇನೋ? ಈದಕ್ಕೆ ಉತ್ತಮ ಉದಾಹರಣೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ವಸತಿ ಶಾಲೆ ಚಂದರಗಿ.

ರಿಯಾಲಿಟಿ ಶೋನ ರಿಯಾಲಿಟಿಗಳು

ಆಕೆಯ ಹೆಸರು ನೇಹಾ ಸಾವಂತ್, ಬಾಲ್ಯದೊಡನೆ ಆಟವಾಡುತ್ತ ಕುಣಿದಾಡುತ್ತಿರಬೇಕಾಗಿದ್ದವಳು ಸಾವಿಗೆ ಶರಣಾಗಿದ್ದಳು. ಸಾವು ಎಂದರೆ ಏನೆಂದು ಅರಿಯದ ವಯಸ್ಸಿನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು! ಸೋನಿ ಚಾನೆಲ್ನ 'ಭೂಗಿ ವಿಗಿ' ರಿಯಾಲಿಟಿ ಶೋನ ಪ್ರಾಥಮಿಕ ಹಂತದಲ್ಲಿ ಒಮ್ಮೆ ಭಾಗವಹಿಸಿದ್ದಳು. ಮತ್ತೆ ಭಾಗವಹಿಸಲು ತಂದೆ-ತಾಯಿ ಒಪ್ಪದ ಕಾರಣ ತನ್ನ ದುಪ್ಪಟ್ಟಾವನ್ನೇ ಯಮಪಾಶವನ್ನಾಗಿಸಿಕೊಂಡು ಮುಂಬೈನ ಮನೆಯಲ್ಲಿ ಹೆಣವಾಗಿ ನೇತಾಡಿದಳು.
ಮುಂಬೈನ ಮತ್ತೊಬ್ಬ ಬಾಲಕ 11ರ ಹರೆಯದ ಸುಶಾಂತ್ ಪಾಟೀಲ್ ಸ್ಥಳೀಯ ಚಾನೆಲ್ವೊಂದರ ಡಾನ್ಸ್ ಶೋನಲ್ಲಿ ಭಾಗವಹಿಸಿದ್ದ. ಇದರಿಂದ ಆತನ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಇದರಿಂದ ಬೇಸತ್ತು ಸಾವಿಗೆ ಶರಣಾಗಿದ್ದ.
ಕರಾಚಿ ಮೂಲದ ಸಾಹದ್ ಖಾನ್ ಅಲ್ಲಿನ ಒಂದು ಖಾಸಗಿ ಚಾನೆಲ್ನ ರಿಯಾಲಿಟಿ ಶೋನಲ್ಲಿ ತನ್ನ ಕುಟುಂಬದವರೊಡನೆ ಭಾಗವಹಿಸುತ್ತಿದ್ದ. ಅದೊಂದು ಸಾಹಸಕ್ಕೆ ಸಂಬಂಧಿಸಿದ ಶೋ ಆಗಿತ್ತು. ದುಡ್ಡಿಗಾಗಿ ಹಪಾಯಿಸಿ ಆತ ಕೊನೆಗೆ ಕಾಲು ಜಾರಿ ನೀರಲ್ಲಿ ಬಿದ್ದು ಮಡದಿ ಹಾಗೂ ಮೂವರು ಮಕ್ಕಳನ್ನು ಅನಾಥವಾಗಿಸಿದ. ಯುನಿಲಿವರ್ ಕಂಪೆನಿ ಆ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿತ್ತು. ಆದ್ದರಿಂದ ಆತನ ಸಾವು ಒಂದು ಎಫ್ಆಯ್ಆರ್ ಕೂಡ ಇಲ್ಲದೇ ಮುಚ್ಚಿ ಹೋಯಿತು.
ಮೇಲಿನ ಮೂರು ಘಟನೆಗಳ ಫಲಿತಾಂಶ ಸಾವೇ ಆಗದ್ದರು ವಿಭಿನ್ನವಾಗಿವೆ.
ನೇಹಾ ಸಾವಂತ್ ಸಾವು ನಮ್ಮನ್ನು ಒಮ್ಮೆ ವಿಚಲಿತಗೊಳಿಸುತ್ತದೆ. ಆ ಮುದ್ದು ಕಂದಳ ಸಾವು ಆಕೆಯ ಪಾಲಕರ ಮೇಲೆ ಸಿಟ್ಟು ಬರಿಸುತ್ತದೆ. ಆ ತಂದೆ-ತಾಯಂದಿರು ಹಾಗೆ ಮಾಡಲು ಕಾರಣವಿತ್ತು. ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಕೆಲ ದಿನಗಳ ಹಿಂದೆ ಎಲ್ಲ ಪಾಲಕರು ಹಾಗೂ ಖಾಸಗಿ ಟಿವಿ ವಾಹಿನಿಯವರಿಗೆ 14 ವರ್ಷಕ್ಕಿಂತ ಎಳೆಯ ಮಕ್ಕಳನ್ನು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಡಿ. ಇದರಿಂದ ಅವರಲ್ಲಿನ ಸ್ಥೈರ್ಯ ಹಾಗೂ ನೈತಿಕ ಮಟ್ಟ ಕುಸಿಯುತ್ತದೆ ಮತ್ತು ಇಂದಿನ ಸ್ಪಧರ್ೆಗಳು ಮಕ್ಕಳಲ್ಲಿನ ಸ್ಪಧರ್ಾತ್ಮಕ ಗುಣವನ್ನು ಸಾಯಿಸುತ್ತಿವೆ. ಇದರಿಂದ ಮಕ್ಕಳು ಒತ್ತಡವನ್ನು ನಿಭಾಯಿಸಲಾರದ ಮಟ್ಟಕ್ಕೆ ತಲುಪುತ್ತಿದ್ದಾರೆ. ಅದರೊಡನೆ ಈ ವಯಸ್ಸು ಕೂಡ ಒತ್ತಡವನ್ನು ಎದುರಿಸಬಹುದಂತಹುದಲ್ಲ ಎಂದು ಎಚ್ಚರಿಕೆ ನೀಡಿತ್ತು. ಇದೇ ಕಾರಣದಿಂದ ನೇಹಾ ಪಾಲಕರು ಆಕೆಯನ್ನು ನೃತ್ಯದಿಂದಲೇ ದೂರ ಸರಿಸಲು ನಿರ್ಧರಿಸಿದ್ದರು. ಆದರೆ ಆಕೆಗೆ ನೃತ್ಯವೇ ಜೀವವಾಗಿತ್ತು. ತಂದೆ-ತಾಯಂದರಿಗೆ ಆಕೆ ಪ್ರಾಣವಾಗಿದ್ದಳು. ಅತ್ತ ಕಡೆ ಖಾಸಗಿ ವಾಹಿನಿಗಳಿಗೆ ಆಕೆಯಂತಹ ಮುಗ್ಧ ಮಕ್ಕಳು ಹಣದ ಗಣಿಯಾಗಿದ್ದರು.
ಸುಶಾಂತ್ ಮನೆ ಹಾಗೂ ಶಿಕ್ಷಕರಿಗೆ ಹೆದರಿ ಸಾವಿಗೆ ಶರಣಾಗಿದ್ದರೆ, ಸಾಹದ್ನನ್ನು ರಿಯಾಲಿಟಿ ಶೋ ಆಪೋಷಣ ತೆಗೆದುಕೊಂಡಿತ್ತು.
ಸ್ಪಧರ್ೆಗಳು ಮಕ್ಕಳ ನೈತಿಕ ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು. ಆದರೆ ಇಂದು ಪ್ರತಿಭಾನ್ವೇಷಣೆಯ ಹೆಸರಲ್ಲಿ ಮುಗ್ಧ ಮಕ್ಕಳ ಮನದಲ್ಲಿ ಹಣ ಹಾಗೂ ಪ್ರತಿಷ್ಠೆಯ ವಿಷವನ್ನು ಬಿತ್ತುತ್ತಿವೆ. ಇದರಿಂದ ಮಕ್ಕಳಲ್ಲಿ ಸ್ಪಧರ್ಾತ್ಮಕ ಮನೋಭಾವನೆಯೇ ದೂರವಾಗುತ್ತಿವೆ. ಪಾಲಕರು ಏನೋ ಮಹದಾಸೆಗೆ ಬಿದ್ದು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಟಿವಿಯಲ್ಲಿ ಮಕ್ಕಳೊಡನೆ ತಾವು ಮಿಂಚಬೇಕು, ಮತ್ತೊಂದೆಡೆ ಅವರು ಇಂಜಿನೀಯರ್, ಡಾಕ್ಟರ್ ಆಗಬೇಕೆಂಬ ಹಟ, ಇವುಗಳ ಗೊಂದಲದಲ್ಲೆ ಸುಶಾಂತನಂತಹ ಹಲವು ಮುಗ್ಧ ಜೀವ ನಮ್ಮನ್ನಗಲುತ್ತಿದೆ. ಇದನ್ನು ಅಪೇಕ್ಷಿಸದೇ ಮಗಳ ಸುಖವನ್ನೆ ಆದರಿಸಿದರೂ, ಟಿವಿ ಹುಚ್ಚು ಹಿಡಿಸಿಕೊಂಡ ನೇಹಾ ಅಂತಹ ಮುಗ್ಧರು ಸಿಗುತ್ತಾರೆ.
ಆದರೆ ನನ್ನಂತಹ ಯಾವುದೇ ಮೊಗ್ಗಿನ ಮನಸ್ಸುಗಳನ್ನು ಕೇಳಿದರೂ ನಾವು ಟಿವಿಯಲ್ಲಿ ಇಷ್ಟಪಡುವ ಕಾರ್ಯಕ್ರಮಗಳು ಸಚ್ ಕಾ ಸಾಮ್ನಾ, ಪತಿ ಪತ್ನಿ ಓರ್ ವೋ ಇಂತಹ ಅಂಡೆಪಿಕರ್ಿ ಕಾರ್ಯಕ್ರಮಗಳೇ ಆಗಿರುತ್ತವೆ. ಏಕೆಂದರೆ ನಾವು ಎಂದೂ ತೆರೆಯ ಹಿಂದಿನ ನೋವು, ಆತಂಕಗಳನ್ನು ನೋಡುವುದೇ ಇಲ್ಲ. ನಂತರ ಕೊನೆಯಲ್ಲಿ ನನ್ನೊಬ್ಬನಿಂದ ಏನು ಮಾಡಲು ಸಾದ್ಯ ಎಂದು ಹೇಳುತ್ತೇವೆ.
ನನ್ನ, ನಿಮ್ಮ ಮನೆಯ ಅಕ್ಕ ಪಕ್ಕದಲ್ಲೂ ಇಂತಹ ಪಾಲಕರು, ಮಕ್ಕಳು ಸಿಗಬಹುದು ಅಥವಾ ನೀವೆ ಆಗಿರಬಹುದು. ಮತ್ತೊಂದೆಡೆ ನಾವು ನೇರವಾಗಿ ಭಾಗವಹಿಸದಿದ್ದರೂ ಇಂತಹ ಕಾರ್ಯಕ್ರಮಗಳನ್ನು ನೋಡುತ್ತಾ ಅದರ ಟಿ.ಆರ.ಪಿ ಹೆಚ್ಚಿಸುತ್ತಾ ಹೋದರೆ ಇಂತಹ ಮುಗ್ಧರ ಸಾವಿಗೆ ನಾವು ಕಾರಣರಾಗುತ್ತೇವೆ. ರಿಯಾಲಿಟಿ ಶೊ ಇರುವುದು ದುಡ್ಡು ಮಾಡಲೇ ಹೊರತು ಪ್ರತಿಭಾನ್ವೇಷಗೆ ಅಲ್ಲ. ಎಸ್.ಎಮ್.ಎಸ್, ಮಕ್ಕಳು ಹಾಕುವ ಬಟ್ಟೆಗೂ ಜಾಹಿರಾತು ತೆಗೆದುಕೊಳ್ಳಲಾಗುತ್ತದೆ. ಒಟ್ಟಿನಲ್ಲಿ ಮಕ್ಕಳು ಆ ವಾಹಿನಿಯ ಜಾಹಿರಾತು ಸರಕುಗಳಾಗುತ್ತಾರೆ.
ಈ ರಿಯಾಲಿಟಿ ಶೋ ವಿದೇಶದಿಂದ ಆಮದು ಮಾಡಿಕೊಂಡಿದ್ದೆಂದು ಅಪ್ಪಿಕೊಳ್ಳುವುದು ಅಥವಾ ಒದ್ದೋಡಿಸುವುದು ತಪ್ಪು. ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಿದೆ. ನಮ್ಮ ಸಂಸ್ಕೃತಿ ಹಾಗೂ ನಡವಳಿಕೆಗೆ ಈ ರಿಯಾಲಿಟಿ ಶೋಗಳು ಒಪ್ಪುತ್ತವೆಯೇ ಎಂದು ಯೋಚಿಸೋಣ.
ಒಂದು ವಿಷಯ ಗೊತ್ತಿರಲಿ ನಮ್ಮ ಎಲ್ಲ ಮಾಧ್ಯಮಗಳು ತಮ್ಮ ಕಾರ್ಯಕ್ರಮದ ರೂಪರೇಷೆ ತಯಾರಿಸುವುದು 18 ರಿಂದ 31ರ ವಯೋಮಾನದವರನ್ನು ಗಮನದಲ್ಲಿಟ್ಟುಕೊಂಡು. ಅಂದ ಮೇಲೆ ಈ ಮೊಗ್ಗಿನ ಮನಸ್ಸೆ ಎಲ್ಲವನ್ನೂ ನಿರ್ಧರಿಸುತ್ತದೆ ಎಂದಾಯಿತು.

ಶೋನ ರೀಯಲ್ ದಂದೆಯಿದು
ರಿಯಾಲಿಟಿ ಶೋ ಎಂಬ ಹುಚ್ಚು ಮಾಯೆ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದು 20ನೇ ಶತಮಾನದ ಪ್ರಥಮಾರ್ಧದಲ್ಲಿ. 1935ರ ಹೊತ್ತಿಗೆ ಅಮೇರಿಕಾದ ಖಾಸಗಿ ರೇಡಿಯೋ ಕೇಂದ್ರವೊಂದು 'ಕ್ಯಾನ್ ಡಿಡ್ ಕ್ಯಾಮರಾ' ರಿಯಾಲಿಟಿ ಶೋ ಪ್ರಾರಂಭಿಸಿತು. ನಂತರದ ದಿನಗಳಲ್ಲಿ ಮೂರ್ಖರ ಪೆಟ್ಟಿಗೆ ತನ್ನ ಭರಾಟೆ ಪ್ರಾರಂಭಿಸಿದ ಮೇಲೆ ಇದೇ ಕಾರ್ಯಕ್ರಮ ಅದೇ ನಿವರ್ಾಹಕ ಅಲೇನ್ ಫಂಟ್ ಅವರು 1953ರಲ್ಲಿ ದೂರದರ್ಶನದಲ್ಲಿ ಪ್ರಸಾರಮಾಡಲು ಪ್ರಾರಂಭಿಸಿದರು.
ನಂತರದ ದಿನಗಳಲ್ಲಿ ಅಮೇರಿಕನ್ ಐಡಲ್, ಬಿಗ್ ಬ್ರದರ್ನಂತಹ ರಿಯಾಲಿಟಿ ಶೋಗಳು ಅದರ ದಿಕ್ಕನ್ನೇ ಬದಲಿಸಿದವು. ಮೊದಲ ದಿನಗಳಲ್ಲಿ ಕೇವಲ ಜನರ ಜೀವನವನ್ನು ನೇರವಾಗಿ ಮುಟ್ಟಿಸುವಂತಹ ಕೆಲಸ ಮಾಡುತ್ತಿದ್ದ ರಿಯಾಲಿಟಿ ಶೋಗಳು ಅವರ ಖಾಸಗಿ ಜೀವನವನ್ನೂ ಸಾರ್ವಜನಿಕ ಮಾಡುತ್ತ ಅದೊಂದು ದೊಡ್ಡ ಮಾರಾಟ ಸಗಟಾಗಿ ರೂಪಗೊಂಡಿತು.
ಆದರೆ ಈ ರಿಯಾಲಿಟಿ ಶೋಗಳು ಭಾರತ ಮಾಧ್ಯಮದಿಂದ ದೂರವೇ ಉಳಿದಿತ್ತು. ಏಕೆಂದರೆ ಭಾರತದಲ್ಲಿ 20 ನೇ ಶತಮಾನದ ಕೊನೆಯ ದಶಕದವರೆಗೂ ಖಾಸಗಿ ಚಾನೆಲ್ಗಳ ಭರಾಟೆಯಿರಲಿಲ್ಲ. ನಮ್ಮ ಆಕಾಶವಾಣಿಗಳು ಸರಕಾರದ ಹಿಡಿತದಲ್ಲೇ ಇದ್ದವು. ಆದರೆ ಖಾಸಗಿ ಮನರಂಜನಾ ಚಾನೆಲ್ಗಳು ವಿದೇಶಿ ರಿಯಾಲಿಟಿ ಶೋಗಳನ್ನು ಬಹು ಪ್ರೀತಿಯಿಂದ ಬಿಗಿದಪ್ಪಿಕೊಂಡವು. ಅವುಗಳ ಅವಶ್ಯಕತೆ ಹಾಗೂ ಅನಿವಾರ್ಯತೆಯನ್ನು ನೋಡಲೇ ಇಲ್ಲ. ಮತ್ತೊಂದೆಡೆ ಅವು ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನಕ್ಕೆ ಹೊಂದುತ್ತವೆಯೋ ಅಥವಾ ಅವು ಯಾವ ರೀತಿಯ ಬದಲಾವಣೆ ಆಗುತ್ತದೆ ಎಂದು ಸಣ್ಣ ಆಲೋಚನೆಯನ್ನು ಮಾಡಲಿಲ್ಲ. ಇದರ ಪರಿಣಾಮ 'ಅಮೇರಿಕನ್ ಐಡಲ್' ಇಲ್ಲಿ 'ಇಂಡಿಯನ್ ಐಡಲ್' ಆಯಿತು. 'ಬಿಗ್ ಬ್ರದರ್' ನಂತಹ ಶೋಗಳು 'ಸಚ್ ಕಾ ಸಾಮ್ನಾ' ಆಗಿ ಬದಲಾಯಿತು. ನಮ್ಮ ಮಾಧ್ಯಮ ರಂಗದ ಚಿತ್ರಣವನ್ನೆ ಬದಲಾಯಿಸಿದ 'ಕೌನ್ ಬನೇಗಾ ಕರೋಡ್ಪತಿ' ಕೂಡ ಅಮೇರಿಕಾದ ಒಂದು ಕಾರ್ಯಕ್ರಮದ ಪ್ರತಿರೂಪ.
ಅಮಿತಾಬ್ ಬಚ್ಚನ್ ಅವರ ಈ ಕಾರ್ಯಕ್ರಮ ಭಾರತದ ರಿಯಾಲಿಟಿ ಶೋನ ಚಿತ್ರಣವನ್ನೆ ಬದಲಾಯಿಸಿ, ಭಾರತೀಯ ವಿದ್ಯುನ್ಮಾನ ಮಾಧ್ಯಮವನ್ನು ಚಿಂದಿ ಚಿತ್ರಾನ್ನ ಮಾಡಿತು. ಸನ್ ನೆಟ್ವಕರ್್ ಹಾಗೂ ಜéಿ ನೆಟ್ವಕರ್್ ತನ್ನ ವಿದೇಶಿ ಚಾನೆಲ್ನ ಕಾರ್ಯಕ್ರಮವನ್ನೇ ಇಲ್ಲಿಗೆ ಬಟ್ಟಿ ಇಳಿಸಿತು. ಆದರೆ ಅದಕ್ಕೆ ಸ್ವಲ್ಪ ವಿಭಿನ್ನವೆಂಬಂತೆ ಭಾರತದಲ್ಲಿ ಫಿಲ್ಮಿ ಹಾಗೇ ಇನ್ನಿತರ ಹಾಡುಗಳ ಆಧಾರದ ಮೇಲೆ ಕಾರ್ಯಕ್ರಮ ಆರಂಭಿಸಿತು. ಆದರೆ ಪ್ರಥಮಾರ್ಧದಲ್ಲಿ ಅದು ಕೊಂಚ ಸಹ್ಯ ಎನಿಸಿದರೂ ನಂತರದ ದಿನಗಳಲ್ಲಿ ಪ್ರತಿಭಾ ಅನ್ವೇಷಣೆ ಆಗುವುದರ ಬದಲು ಪ್ರತಿಭಾ ಹಂತಕರಂತೆ ಮಾರ್ಪಟ್ಟಿತು.
ಕನ್ನಡದ 'ಎದೆ ತುಂಬಿ ಹಾಡುವೆನು' ಎಂಬ ಕಾರ್ಯಕ್ರಮ ಮೊದಲ 2 ಕಂತುಗಳಲ್ಲಿ ನೈಜ ಪ್ರತಿಭೆಗಳನ್ನು ಹುಡುಕಿತು. ಆದರೆ ನಂತರ ಯಾವಾಗ ಹಿಂದಿಯಂತೆ ಕನ್ನಡಕ್ಕೂ ಎಸ್.ಎಮ್.ಎಸ್ ಮತದಾನ ಯಾವಾಗ ಆರಂಭವಾಯಿತೋ ಅಂದಿನಿಂದ ರಿಯಾಲಿಟಿ ಶೋನ ಬಗ್ಗಿದ್ದ ಸ್ವಲ್ಪ ಗೌರವ ಪ್ರೀತಿಯೂ ಮಾಯವಾಯಿತು.
ಅದೂ 'ಇಂಡಿಯನ್ ಐಡಲ್'ನ 3ನೇ ಆವೃತ್ತಿ. ಪ್ರಶಾಂತ್ ತಮಾಂಗ್ ಅದರ ವಿಜೇತರಾಗಿದ್ದರು. ಅಂದು ಡಾರ್ಜಲಿಂಗ್ನ ಶಾಸಕ, ಮತ್ತೊಂದೆಡೆ ಅದರ ರನ್ನರ್ ಅಪ್ ಅಮಿತ್ ಪೌಲ್ ಅವರ ಕ್ಷೇತ್ರದ ಮೇಘಾಲಯ ಶಾಸಕರು ಸುಮಾರು 15 ಸಾವಿರಕ್ಕಿಂತಲೂ ಅಧಿಕ ಎಸ್.ಎಮ್.ಎಸ್ ಕಳಿಹಿಸುವ ವ್ಯವಸ್ಥೆ ಮಾಡಿದ್ದರು. ಹೀಗೆ ಇಂತಹ ಒಂದು ಕಾರ್ಯಕ್ರಮಕ್ಕೆ ಸರಿ ಸುಮಾರು 10 ಕೋಟಿ ಎಸ್.ಎಮ್.ಎಸ್ ಬರುತ್ತದೆ ಎಂದರೆ ನಂಬಲು ಅಸಾಧ್ಯ. ಪ್ರತಿ ಎಸ್.ಎಮ್.ಎಸ್ಗೆ ಸರಾಸರಿ 5 ರೂ ಚಾಜರ್್ ಮಾಡಲಾಗುತ್ತದೆ. ಅಂದರೆ ಎಸ್.ಎಮ್.ಎಸ್ ಮೂಲಕ 50 ಕೋಟಿ ರೂ ವ್ಯವಹಾರ ಮಾಡಲಾಗುತ್ತದೆ. ಅದರಲ್ಲಿ ಚಾನೆಲ್ಗೆ ಶೇ.60 ಸೇರಿದರೆ ಇನ್ನುಳಿದದ್ದು ಮೊಬೈಲ್ ಕಂಪೆನಿಗೆ ತಲುಪತ್ತದೆ. ಅಂದರೆ ಎಸ್.ಎಮ್.ಎಸ್ ಮತದಾನದ ಹಿಂದಿನ ಮರ್ಮ ಏನೆಂಬುದು ಪ್ರತ್ಯೇಕವಾಗಿ ತಿಳಿಸಬೇಕಿಲ್ಲ. ಈ ಎಸ್.ಎಮ್.ಎಸ್ ವ್ಯವಸ್ಥೆ ಬಂದ ಮೇಲೆ ತಾನೆ ಈ ನಿರ್ಣಯ ಸರಿಯಿಲ್ಲ ಎಂದು ಪ್ರತಿಯೊಬ್ಬರು ಮಾತನಾಡುತ್ತಾರೆ.
ನಾವು ಗ್ರಹಿಸಿದ ಅಬ್ಯಥರ್ಿ ಅಲ್ಲಿ ಪ್ರಶಸ್ತಿಗೆ ಭಾಜನರಾಗಿರುವುದಿಲ್ಲ. ಯಾವುದೋ ವ್ಯಕ್ತಿ ಅಲ್ಲಿ ಇನ್ನಾವುದೋ ಪ್ರಭಾವದಿಂದ ಮೆರೆದಿರುತ್ತಾನೆ.

ಜಾಹಿರಾತು ಸ್ಪಾಟ್ನಂತೆ ಸ್ಪಧರ್ಿ, ನಿರ್ಣಯಗಳು ಬಿಕರಿಗಿವೆ
'ಇಂತಹ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಸಿ ಈ ರೀತಿಯ ಕೆಟ್ಟ ಪ್ರದರ್ಶನ ನೀಡುತ್ತೀಯಾ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. ರೀಯಲಿ ಇಟ್ ಇಸ್ ಶೇಮ್' ಎಂದು ನಿಣರ್ಾಯಕ ವಾಚಾಮಗೋಚರವಾಗಿ ಉಗಿಯುತ್ತಿದ್ದರೆ ಅದಕ್ಕೆ ಜಗತ್ತೇ ತಲೆ ಮೇಲೆ ಕಳಚಿ ಬಿದ್ದಂತೆ ಹಿನ್ನಲೆ ಸಂಗೀತ, ಎಲ್ಲವೂ ಮುಗಿಯಿತೆಂಬತೆ ಸಂಬಂಧಿಕರ ರೋದನ ಮತ್ತೊಂದೆಡೆ ಆ ಸ್ಪಧರ್ಿ ಕುಸಿದು ಬಿಕ್ಕಳಿಸುತ್ತಾ ಬೀಳುತ್ತಾನೆ.
ಈ ಪೂರ್ವನಿಯೋಜಿತ ನಾಟಕ ಬಹುತೇಕ ರಿಯಾಲಿಟಿ ಶೋಗಳು ಅನುಸರಿಸುವ ಗಿಮಿಕ್. ಅದಕ್ಕೆ ಮತ್ತೊಂದಿಷ್ಟು ಮಸಾಲಾ ಸೇರ್ಪಡೆ. ಮತ್ತೆ ಸ್ಪಧರ್ಿ ಹಾಗೂ ಅವರ ಕುಟುಂಬದವರು ನಿಣರ್ಾಯಕರೊಡನೆ ಕಚ್ಚಾಡುವುದು ಇಂತಹ ನೂತನ ಹಾಗೂ ಅಸಂಪ್ರದಾಯಿಕ ಬಗೆಗಳನ್ನು ನಾವು ಭಾರತದಲ್ಲಿ ರಿಯಾಲಿಟಿ ಶೋನಲ್ಲಿ ನೋಡಲು ಮಾತ್ರ ಸಾಧ್ಯ.
ನಿಣರ್ಾಯಕರು ಹಾಗೂ ನಿರ್ಣಯಗಳನ್ನು ಗೌರವಿಸುವುದು ಯಾವುದೇ ಒಂದು ಸ್ಪಧರ್ೆಯ ಮೂಲ ನಿಯಮ. ಆದರೆ ಇಂದಿನ ರಿಯಾಲಿಟಿ ಶೋಗಳು ಜನರಲ್ಲಿನ ಸ್ಪಧರ್ಾ ಮನೋಭಾವನೆಯನ್ನೇ ಬುಡಸಮೇತ ಕಿತ್ತು ಹಾಕುತ್ತಿವೆ. ಇದಕ್ಕೆ ಸರಿಯಾಗಿ ಅವರ ಪಾಲಕರು ಸೊಪ್ಪು ಹಾಕುತ್ತಿದ್ದಾರೆ. ನೀನು ಈ ಪ್ರಶಸ್ತಿಯನ್ನು ಗೆಲ್ಲದಿದ್ದರೆ ಎಂದು ನೂರಾರು ಕಾರಣ ಮತ್ತು ಪ್ರತಿಷ್ಠೆಯನ್ನು ಮುಂದಿಡುತ್ತವೆ. ಜಗತ್ತು ಏನೆಂದು ತಿಳಿಯದ ವಯಸ್ಸಿನಲ್ಲಿ ಒಂದು ಚಿಕ್ಕ ಮಗು ಯಾವುದೋ ಒಂದು ಸ್ಪಧರ್ೆಗೆ ಕೃತಕ ಪ್ರೌಢತೆಯನ್ನು ಪ್ರದಶರ್ಿಸಬೇಕು.
ಹಾಗಾದರೆ ಏನಕ್ಕೆ ಇವೆಲ್ಲ ನಾಟಕಗಳು ನಡೆಯುತ್ತಿವೆ. ಕೇವಲ ಬಾಯಿಯಲ್ಲಿ, ನಟನೆಯಲ್ಲೇ ತಾವೊಬ್ಬ ಘನ ನಿಣರ್ಾಯಕರೆಂದು ತೋರಿಸಿಕೊಳ್ಳುತ್ತಿದ್ದಾರೆ. ಅನಾವಶ್ಯಕವಾಗಿ ಸ್ಪಧರ್ಿಗಳಲ್ಲಿ ಆತಂಕ ಮೂಡಿಸುವ ಪ್ರಮೇಯವನ್ನೇಕೆ ಸೃಷ್ಟಿಸುತ್ತಿದ್ದಾರೆ. ಇಂತಹ ಗೊಂದಲಗಳು ಕಾಡುವುದು ಸಾಮಾನ್ಯ.
ರಿಯಾಲಿಟಿ ಶೋನ ಪ್ರಾರಂಭ ಘಟ್ಟದಲ್ಲಿ ಇಂತಹ ಪ್ರಮಾದಗಳು ಕಡಿಮೆ ಇದ್ದವು. ಆದರೆ ಇದರ ಭರಾಟೆ ಹೆಚ್ಚದಂತೆಲ್ಲ ರಿಯಾಲಿಟಿ ಶೋನ ನಿರ್ಣಯಗಳಲ್ಲೂ ನಿಣರ್ಾಯಕರು ಹಾಗೂ ಚಾನೆಲ್ಗಳು ದಂಧೆ ಮಾಡಲು ಆರಂಭಿಸಿದವು. ಸ್ಪಧರ್ಿಗಳ ಆಯ್ಕೆಯಿಂದ ಹಿಡಿದು, ಪ್ರಶಸ್ತಿ ಆಯ್ಕೆವರೆಗೂ ಡೀಲಿಂಗ್ ಆರಂಭವಾಯಿತು. ಕನ್ನಡದ ಪ್ರಮುಖ ಮನರಂಜನಾ ಚಾನೆಲ್ನ ರಿಯಾಲಿಟಿ ಶೋನ ಬಗ್ಗೆ ಇತ್ತೀಚೆಗೆ ಇಂತಹ ಒಂದು ಕೂಗು ಬಲವಾಗಿ ಎದ್ದಿತ್ತು. ನಿಣರ್ಾಯಕರು ಹಾಗೂ ನಿರ್ಣಯಗಳು ಜಾಹಿರಾತು ಸ್ಪಾಟ್ನಂತೆ ಅವು ಕೂಡ ಬಿಕರಿಯಾಗತೊಡಗಿದವು. ಅದರ ನೇರ ಪರಿಣಾಮ ಸ್ಪಧರ್ಾಳು ಹಾಗೂ ಕಾರ್ಯಕ್ರಮದ ಗುಣಮಟ್ಟದ ಮೇಲೆ ಬೀರಿತು.
ಭಾರತದ ರಿಯಾಲಿಟಿ ಶೋನ ಪಾಲಿಗೆ 'ಕೌನ್ ಬನೇಗಾ ಕರೋಡ್ಪತಿ' ಇತಿಹಾಸವನ್ನೇ ಬರೆಯಿತು. ಅದರ ಪ್ರಥಮ ಸಂಚಿಕೆಗಳಲ್ಲಿ ಭಾಗವಹಿಸುವವರನ್ನು ನಾವು ಮಾದರಿಯಾಗಿ ಪರಿಗಣಿಸಬಹುದಿತ್ತು. ಏಕೆಂದರೆ ಆ ಕ್ಷೇತ್ರದಲ್ಲಿ ಅವರು ಅಂತಹ ಪರಿಣಿತಿ ಪಡೆದೆ ಆ ವೇದಿಕೆ ಹತ್ತುತ್ತಿದ್ದರು. ಆದರೆ ನಂತರದ ಅವತರಣಿಕೆಗಳಲ್ಲಿ ಅವು ಮಂಗಮಾಯವಾಯಿತು. ಸಾಮಾನ್ಯ ಜ್ಞಾನದ ಎಲ್ಲಕ್ಷರವೂ ಗೊತ್ತಿಲ್ಲದ ನಟಿಮಣಿಯರನ್ನು ಕೂರಿಸಿ ಸಿಲ್ಲಿ ಸಿಲ್ಲಿ ಪ್ರಶ್ನೆಗಳನ್ನು ಕೇಳಿ ಕರೋಡ್ಪತಿ ಮಾಡುವ ಪ್ರಯತ್ನಗಳು ಜಾರಿಗೆ ಬಂದವು. ಇದು ಹಾಗೆ ಮುಂದುವರಿದು 'ಯಾರಿಗುಂಟು ಯಾರಿಗಿಲ್ಲ' ಎನ್ನುವಂತಹ ಪಕ್ಕಾ ಮೂರ್ಖರ ಶೋಗಳು ಪ್ರಾರಂಭವಾದವು.
ಡಾ.ವಿಷ್ಣುವಧರ್್ನ್ ಇತ್ತೀಚಿನ ಚಿತ್ರ ತೋರಿಸಿ ಇದು ಯಾರ ಭಾವಚಿತ್ರ ಎಂದು ಕೇಳುವ ಮಟ್ಟಿಗೆ ಕನ್ನಡದ ರಿಯಾಲಿಟಿ ಕಾರ್ಯಕ್ರಮಗಳು ಬಂದು ತಲುಪಿವೆ. ಇಂತಹ ಶೋಗಳ ಟಿ.ಆರ್.ಪಿ ಕೂಡ ಹೆಚ್ಚುತ್ತಿದೆ. ಕಾರಣ ನಾವು ಮೂರ್ಖರು ಇಂತಹ ಮೂರ್ಖ ಕಾರ್ಯಕ್ರಮ ನೋಡುತ್ತಾ ಕೂರುತ್ತೇವೆ. ಖಾಸಗಿ ವಾಹಿನಿಯವರು ಇದನ್ನು ಮುಂದುವರೆಸುತ್ತಾ ಸಾಗುತ್ತಾರೆ.
ಮೊದಲೇ ಹೇಳಿದಂತೆ ಸ್ಪಧರ್ೆಯಲ್ಲಿ ಸೋತರೆ ಜಗತ್ತು ಪ್ರಳಯವಾದಂತೆ ವತರ್ಿಸುವುದೇಕೆ. ನಮ್ಮ ಸಾಧನೆಯ ನಾಗಾಲೋಟಕ್ಕೆ ಇದು ಬ್ರೇಕ್ ಹಾಕಿಬಿಡುತ್ತದೆಯೇ. ಮುಂದಿನ ಎಲ್ಲ ಮಾರ್ಗಗಳು ಮುಚ್ಚಿಬಿಟ್ಟವೇ? ಸೋತ ಕೂಡಲೇ ಆ ರೀತಿಯ ರಂಪಾಟದ ಅವಶ್ಯಕತೆ ಇದೆಯೇ?
ಹೌದು. ಇವೆಲ್ಲ ಅವಶ್ಯಕತೆ ಚಾನೆಲ್ಗಳಿಗೆ ಇದೆ. ಆಗ ಮಾತ್ರ 'ಸೆನ್ಸೇಷನಲೈಸ್' ಮಾಡಬಹುದು. ನೋಡುಗರನ್ನು ಕುಚರ್ಿಯ ತುದಿಗೆ ಎಳೆದೊಯ್ಯಬಹುದು. ನಾವು ಕೂಡ ಖುಷಿ ಕಾಣುವುದು ಇತರರ ದುಃಖದಲ್ಲಿಯೇ ತಾನೆ. ಅದನ್ನೆ ಅವು ಬಂಡವಾಳವಾಗಿಸಿಕೊಳ್ಳುತ್ತಿವೆ. ಸ್ಪಧರ್ೆಗಳನ್ನು ಆಟವೆಂದು ಭಾವಿಸಿ ಭಾಗವಹಿಸುವ ಮಕ್ಕಳಲ್ಲಿ ಸೋಲು-ಗೆಲುವಿನ ಕಿಚ್ಚನ್ನು ಹೊತ್ತಿಸುತ್ತವೆ. ಯುವಕರಲ್ಲಿ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿಸುತ್ತವೆ. ನಿಣರ್ಾಯಕರ ಮೇಲೆ ರೇಗುವಂತೆ ಪ್ರೇರೆಪಿಸುತ್ತವೆ. ಇವೆಲ್ಲದಕ್ಕೂ ನಾವು ಮೂಖ ಪ್ರೇಕ್ಷಕರಾಗುತ್ತೇವೆ. ಮೂಖ ಪ್ರೇಕ್ಷಕರಾಗಿ ಗೊತ್ತಿಲ್ಲದೆಯ ಚಪ್ಪಾಳೆ ತಟ್ಟುತ್ತೇವೆ. ನೂರಾರು ಅಮಾಯಕ ಪ್ರತಿಭೆಗಳನ್ನು ಚಿವುಟಿ ಹಾಕಲು ನಾವೇ ಪ್ರೇರಣೆಯಾಗುತ್ತೇವೆ.
ಗೂಬೆ ಕೂರಿಸುವದನ್ನು ನಿಲ್ಲಿಸಿ ನಾವೇ ಮುಂದಾಗೋಣ
ಮಹಿಳೆ ಹಾಗೂ ಮಕ್ಕಳ ಹಕ್ಕುಗಳ ಪರವಾಗಿ ನಾವಿಂದು ಕಂಡಕಂಡಲ್ಲಿ ಸೋಗಲಾಡಿ ಭಾಷಣಗಳನ್ನು ಕೇಳುತ್ತಿರುತ್ತೇವೆ. ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರೂ ಕೂಡ ತಮ್ಮ ಭಾಷಣದಲ್ಲಿ ಪದೇ ಪದೇ ಇದನ್ನೆ ಪ್ರಸ್ತಾಪಿಸಿದ್ದಾರೆ ಕೂಡ. ಆದರೆ ಮಜಾ ಎಂದರೆ ಎಲ್ಲರೂ ಕೇವಲ ಸಮಸ್ಯೆಗಳ ಬಗ್ಗೆ ಮಾತನಾಡಿ ವಿದ್ಯುನ್ಮಾನ ಮಾದ್ಯಮಕ್ಕೆ ಅಲ್ಪಮಟ್ಟಿನ 'ಮಂತ್ರಾಕ್ಷತೆ' ಮಾಡಿ ತಮ್ಮ ಪಾಡಿಗೆ ತಾವಿರುತ್ತಾರೆ.
ಅಲ್ಲಾ ಸ್ವಾಮಿ, ಎಲ್ಲ ತಪ್ಪುಗಳನ್ನು ಇತರರ ಮೇಲೆ ಹೊರಿಸುತ್ತಾ ಕೂತರೆ ನನ್ನ-ನಿಮ್ಮ ಜವಾಬ್ದಾರಿ ಏನು ಹಾಗಾದರೆ. ಹೀಗೆ ಹರಟೆ ಕಟ್ಟೆಯಲ್ಲಿ ಕೂತು ಬಡಾಯಿ ಕೊಚ್ಚಿ ಕೊಳ್ಳುವುದೆ. ನಮ್ಮ ಕಷ್ಟದ ಬಗ್ಗೆ ನಾವು ಇಷ್ಟದಿಂದ ಧ್ವನಿ ಏರಿಸುವುದು ಯಾವಾಗ. ಅದಕ್ಕೊಂದು ಕ್ರಿಯಾತ್ಮಕ ರೂಪ ನೀಡಿ ಯಶ ಸಾಧಿಸಲು ಅಸಾಧ್ಯವೇ ಹಾಗಾದರೆ.
ಮೂರ್ಖರ ಪೆಟ್ಟಿಗೆಯ ರಿಯಾಲಿಟಿ ಶೋಗಳ ವಿರುದ್ಧ ಕೆಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವೆ ಅಂಬಿಕಾ ಸೋನಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಸಾಕಷ್ಟು ಬಾರಿ ಬಹಿರಂಗವಾಗಿಯೇ ಗರಂ ಆದ ಉದಾಹರಣೆ ಇದೆ. ಆದರೆ ಅದರ ಜೊತೆ ತಮ್ಮ ಅಸಾಹಯಕತೆಯನ್ನು ಪರೋಕ್ಷವಾಗಿ ತೋರಿಸಿವೆ. ಕೇಂದ್ರ ಸರಕಾರ ಮತ್ತು ಮಕ್ಕಳ ಹಕ್ಕುಗಳ ಆಯೋಗ ಇತ್ತೀಚೆಗೆ ಒಂದು ನಿದರ್ೇಶನ ಹೊರಡಿಸಿ, ಅಪ್ರಾಪ್ತ ವಯಸ್ಸಿನ ಮಕ್ಕಳ ರಿಯಾಲಿಟಿ ಶೋ ವಿರುದ್ಧ ಹರಿಹಾಯ್ದಿದೆ. ಮಕ್ಕಳನ್ನು ಇಂತಹ ಶೋಗಳಿಗೆ ಭಾಗವಹಿಸಲು ಅವಕಾಶ ಮಾಡಕೊಡದಿರಿ ಎಂದು ಪಾಲಕರಿಗೆ ತಿಳಿಸಿದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ 12 ಗಂಟೆಗಿಂತಲೂ ಹೆಚ್ಚಿನ ಶ್ರಮ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದೂ ತಿಳಿಸಿದೆ. ಆದರೆ ನಮ್ಮ 'ಬುದ್ಧಿವಂತ' ಪಾಲಕರು ಯಾವುದಕ್ಕು ಬಗ್ಗಲಿಲ್ಲ. ಆದರೂ ತಮ್ಮ ಮಕ್ಕಳನ್ನು ಜಾಹಿರಾತು ಸರಕುಗಳನ್ನಾಗಿ ಪರಿವತರ್ಿಸುತ್ತಾ ಸಾಗಿದ್ದಾರೆ. ಮಕ್ಕಳನ್ನು ಹಣಕ್ಕಾಗಿ ಅಲ್ಪ ಸಮಯದ ಮಟ್ಟಿಗೆ ಮಾರುವಂತಹ ನೀಚ ಮಟ್ಟಕ್ಕೆ ನಮ್ಮ ಸಮಾಜ ಬಂದು ತಲುಪಿದೆ.
ಇಂತಹ ಕಾರ್ಯಕ್ರಮಗಳನ್ನು ನಿಲ್ಲಿಸಿ ಎಂದು ಹೇಳುವ ದಾಡಶಿತನ ನಮ್ಮ ಸರಕರಗಳಿಲ್ಲ. ಅವುಗಳ ನಪುಂಸಕತೆ ಎಲ್ಲರಿಗೂ ತಿಳಿದ ವಿಷಯ. ಆದರೆ ನಮ್ಮ ಸಮಸ್ಯೆಗಳಿಗೆ ಸರಕಾರಕ್ಕೆ ಎಷ್ಟು ಅಂತ ಗೂಬೆ ಕೂರಿಸುವುದು. ನಾವೇ ನ್ಮಮ ದುಡ್ಡಿನ ಹಪಾಹಪಿಯನ್ನು ಅಲ್ಪ ಮಟ್ಟಿಗೆ ನಿಯಂತ್ರಿಸಿಕೊಂಡರೆ ಇಂತಹ ಅಪರಾ-ತಪರಾ ಶೋಗಳನ್ನು ನಿಯಂತ್ರಿಸಬಹುದು ತಾನೆ.
ಮಾಧ್ಯಮ ರಂಗ ವಾಣಿಜ್ಯೀಕರಣವಾಗಿರುವುದು ನೂರಕ್ಕೆ ನೂರರಷ್ಟು ಸತ್ಯ. ಆ ಸಂದರ್ಭದಲ್ಲಿ ಹಣ ಹಾಗೂ ಲಾಬದತ್ತ ಹೊರಳುವುದು ಸಾಮಾನ್ಯ. ಇಂತಹ ರಿಯಾಲಿಟಿ ಶೋಗಳಿಂದ ಅವರಿಗೆ ಎಲ್ಲಿಯ ತನಕ ಬಂಪರ್ ಆದಾಯ ಬರುತ್ತಿರುತ್ತದೆಯೋ ಅಲ್ಲಿಯವರೆಗೆ ಅವರು ಬಿಂದಾಸ್ ಆಗಿ ಇರ್ತಾರೆ. ನಾವು ಅಂತಹ ಕಾರ್ಯಕ್ರಮಗಳಿಗೆ ಸ್ಪಂದಿಸಿದರೆ ಮಾತ್ರ ಅವರಿಗೆ ಜಾಹಿರಾತುದಾರರ ಹಾಗು ಹಣದ ಸ್ಪಂದನೆ ದೊರಕುವುದು. ನಾವು ಈ ಕೆಲಸವನ್ನು ಇಂದೆ ನಿಲ್ಲಿಸಿದರೆ, ಅನಿವಾರ್ಯವಾಗಿ ಬೇರೊಂದು ಕಾರ್ಯಕ್ರಮ ಪರಸಾರ ಮಾಡಲೇಬೇಕು. ಆದರೆ ನಮ್ಮ ಜಡತ್ವ ಹೇಗೆಂದರೆ ಮಾಧ್ಯಮ ಪ್ರಸಾರ ಮಾಡುತ್ತಿದೆ ಎಂದು ಮನೆಯಲ್ಲಿ ಸೋಫಾದಲ್ಲಿ ಕುಳಿತು ಬೈಯುತ್ತಾ ಕಾರ್ಯಕ್ರಮ ನೋಡುತ್ತೇವೆ. ಸ್ವಾಮಿ, ನೀವು ಕಾರ್ಯಕ್ರಮ ನೋಡುವುದನ್ನು ನಿಲ್ಲಿಸದರೆ ಮಾತ್ರ ಚಾನೆಲ್ ತನ್ನ ಇಂತಹ ಹುಚಾಂಪಟ್ಟೆ ಕಾರ್ಯಕ್ರಮಕ್ಕೆ ಬ್ರೇಕ್ ಹಾಕುತ್ತದೆ.
ನಮ್ಮ ಎಲ್ಲ ಬೈಗುಳಕ್ಕಿಷ್ಟು ಮುಕ್ತಿ ಹಾಡಿ, ರಚನಾತ್ಮಕ ಹೆಜ್ಜೆಗಳಿಡೋಣ. ನಾವು ಇತ್ತೀಚೆಗಷ್ಟೆ ರಾಖಿ ಸಾವಂತ್ ಸ್ವಯಂ ವರ ನೋಡಿ ಮುಗಿಸಿದ್ದೇವೆ. ಅತ್ತ ಕಡೆ ಅಬ್ಬೆ ಪಾರಿ ರಾಹುಲ್ ಮಹಾಜನ್ ಕೂಡ ರಿಯಾಲಿಟಿ ಶೋನಲ್ಲೆ ಹುಡುಗಿ ಹುಡುಕಿಕೊಂಡು ಹನಿಮೂನ್ ಹೊರಡಲು ಅನುಮತಿ ನೀಡಲು ಕೋಟರ್್ ಮೊರೆ ಹೋಗಿದ್ದಾರೆ. ನಾವಿಂದು ಎಮತಹ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದೇವೆ ಒಮ್ಮೆ ಆಲೋಚಿಸಿ. ಭಾರತದಲ್ಲಿ ಸ್ವಯಂವರದ ಕಲ್ಪನೆ ಮಹಾಭಾರತ ಹಾಗೂ ರಾಮಾಯಣದಿಂದಲೂ ನಡೆದು ಬಂದಿದೆ ಎಂಬ ಪ್ರತೀತಿ ಇದೆ. ಆದರೆ ಆಗ ಅದನ್ನು ಮಹಿಳಾ ಸಮಾಜಕ್ಕೆ ಕಲದಷದಂತಿದ್ದ ಸೀತೆ, ಸುಭದ್ರೆಯಂತವರು ಇದ್ದರು. ಆದರೆ ಇಂದು 'ಹೆಂಗಸೆ' ಎಂದು ಅನುಮಾನ ಪಡುವಷ್ಟು 'ಚೀಪ್' ಆದ ರಾಖಿ ಸಾವಂತ್ ನಮ್ಮ ಮಹಿಳಾ ಸಮಾಜಕ್ಕೆ ಮಾದರಿ ಹೆಣ್ಣಾಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಭಯ ಕಾಡುತ್ತದೆ. ಅಪ್ಪ ಸತ್ತು ಒಂದೇ ತಿಂಗಳಲ್ಲಿ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಜೈಲು ಸೇರಿ, ಮತ್ತೊಂದು ತಿಂಗಳಲ್ಲಿ ಮದುವೆಯಾಗಿ, ಮತ್ತೈದು ತಿಂಗಳಿಗೆ ಡೈವೋಸರ್್ಗೆ ಅಜರ್ಿ ಹಾಕಿದ 'ಅವತಾರ ಪುರುಷ' ರಹುಲ್ ಮಹಾಜನ್ ನಮ್ಮ ಯುವಕರಿಗೆ ದಾರಿದೀಪವೇ?! ನಾನು-ನೀವು ಇದನ್ನು ಮುಗಮ್ಮನೆ ಕೂತು ನೋಡುತ್ತಾ ಇರುವವರೆಗೂ ಇಂತಹ ನಾಚಿಕೆಗಳು ಮುಂದುವರೆಯುತ್ತವೆ.
ಹುಷಾರ್! ಮುಂದೆ ಇವರ ಹನಿಮೂನ್ ಹಾಗೂ ಮೊದಲ ರಾತ್ರಿಗಳೂ ಕೂಡ ರಿಯಾಲಿಟಿ ಶೋಗೆ ವಿಷಯವಾಗಬಹುದು!!

ಪ್ರಯತ್ನ ನಮ್ಮದಾಗಲಿ, ಫಲಿತಾಂಶಕ್ಕಾಗಿ ಕಾಯೋಣ
ಕಳೆದ 4 ಸಂಚಿಕೆಗಳಲ್ಲಿ ರಿಯಾಲಿಟಿ ಶೋನ ವಿವಿಧ ಆಯಾಮಗಳನ್ನು ಚಚರ್ಿಸಿಯಾಗಿದೆ. ರಿಯಾಲಿಟಿ ಶೋನ ಅವಶ್ಯಕತೆ, ದಂಧೆಗಳ ಬ್ಗಗೆ ಮಾತಾಡಿಯಾಗಿದೆ. ಹಾಗಾದರೆ ಈ ರಿಯಾಲಿಟಿ ಶೋಗಳು ಕೇವಲ ಶೋಕಿಗಷ್ಟೇ ಎಂದಲ್ಲ. ಜಗತ್ತು ಬದಲಾದಂತೆ ಮಾಧ್ಯಮಗಳು ಬದಲಾಗುವುದು ಅನಿವಾರ್ಯ. ಈ ಭರಾಟೆಯಲ್ಲಿ ರಿಯಾಲಿಟಿ ಶೋಗಳಂತಹ ಕಾರ್ಯಕ್ರಮ ಅನಿವಾರ್ಯ.
ಆದರೆ ಈ ಅನಿವಾರ್ಯತೆಯನ್ನು ಸ್ವೀಕರಿಸುವಾಗ ಕೊಂಚ ಯಯೋಚಿಸಬೇಕು. ಎಂತಹ ಅನಿವಾರ್ಯತೆಗಳನ್ನು ಬರಮಾಡಿಕೊಳ್ಳಬೇಕು, ಅವು ಯಾವ ರೀತಿಯಲ್ಲಿ ಚಾನೆಲ್ಗಳಿಗೆ ಆದಾಯ ತಂದುಕೊಡುತ್ತವೆ ಎಂದು ಆಲೋಚಿಸುವಾಗ, ಸಮಾಜದ ಮೇಲೂ ಯಾವ ರೀತಿಯ ಪರಿಣಾಮ ಬೀರಬಲ್ಲದು ಎಂದು ಒಮ್ಮೆ ಯೋಚಿಸಿ.
ರಿಯಾಲಿಟಿ ಶೋ ಹಾಗೂ ಇನ್ನಿತರ ಕಾರ್ಯಕ್ರಮಗಳ ಯಶಸ್ಸು ನನ್ನ ಮೇಲೆ, ಹಾಗೂ ನನ್ನಂತಹ ಲಕ್ಷಾಂತರ ಯುವಕರ ಮೇಲೆ ನಿಂತಿದೆ. ನಾವು ಇದನ್ನು ವಿರೋಧಿಸಿದರೆ ಸಾಮಾನ್ಯವಾಗಿ ಆ ಕಾರ್ಯಕ್ರಮಗಳು ಮರೆಯಾಗುತ್ತವೆ. ಪ್ರತಿಭಾನ್ವೇಷಣೆಯ ಹೆಸರಲ್ಲಿ ಕೊಳ್ಳೆ ಹೊಡೆಯುವುದನ್ನು ನಿಲ್ಲಿಸೋಣ. ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಾ ಮತ್ತೊಬ್ಬರ ಸಾವಿಗೆ ನಾವು ಪರೋಕ್ಷ ಕಾರಣವಾಗುವುದು ಬೇಡ. ಮೊಗ್ಗನ ಮನಸ್ಸುಗಳೆ ಇದಕ್ಕಿಂತ ಅತ್ಯುತ್ತಮವಾದಂತಹ ಕರ್ಯಕ್ರಮಗಳು ನಮ್ಮಲಲಿವೆ. ಅವುಗಳತ್ತ ನಮ್ಮ ಚಿತ್ತ ಹಾಯಿಸೋಣ. ನಮ್ಮ ಮಾದರಿಗಳು ಟಿವಿಯಲ್ಲಿ ಬರುವ ಸೆಲೆಬ್ರೆಟಿಗಳನ್ನು ಮಾಡಿಕೊಳ್ಳುವ ಬದಲು ನಮ್ಮ ಸುತ್ತಮುತ್ತಲಿರುವ ರೀಯಲ್ ಹೀರೋ ಹಾಗೂ ಹೀರೋಯಿನ್ಗಳನ್ನು ಮಾಡಿಕೊಳ್ಳೋಣ.
ಒಪ್ಪಿ-ಅಪ್ಪಬಬಹುದಾದದ್ದು
'ಕೌನ್ ಬನೇಗಾ ಕರೋಡ್ಪತಿ', ಮೊದಲಿದ್ದ ಮಾದರಿಯ 'ಎದೆ ತುಂಬಿ ಹಾಡುವೆನು' ಇಂತಹ ಕಾರ್ಯಕ್ರಮಗಳನ್ನು ಒಪ್ಪಬಹುದು. ಅಂತಹ ಕಾರ್ಯಕ್ರಮಗಳಿಂದಲೇ ಸುರೇಖಾ ಹೆಗಡೆ, ಕಾತರ್ಿಕ್ ಅಂತಹ ಅನೇಕ ಯುವ ಗಾಯಕರು ಕನ್ನಡಕ್ಕೆ ಪರಿಚಯವಾದರು. ಕರೋಡ್ಪತಿಯಂತಹ ಕಾರ್ಯಕ್ರಮಗಳಿಂದ ಅನೇಕ ಪ್ರತಿಭಾನ್ವೇಷಣೆಗೂ ಕಾರಣವಾಯಿತು. ಆದರೆ ಇಂತಹ ಕಾರ್ಯಕ್ರಮಗಳು ಮುಂದೆ 'ಯಾರಿಗುಂಟು ಯಾರಿಗಿಲ್ಲ', 'ದಸ್ ಆ ಧಮ್' ನಂತಹ ಬ್ಲಂಡರ್ ಕಾರ್ಯಕ್ರಮಗಳು ಖಾಸಗಿ ಚಾನೆಲ್ಗಳನ್ನು ಆವರಿಸಿದ್ದು ನಮ್ಮ ದುರಾದೃಷ್ವೇ ಸರಿ.
ಖಾಸಗಿ ವಾಹಿನಿಗಳು ಯಾವುದೇ ಒಂದು ಕಾರ್ಯಕ್ರಮ ಪ್ರಸಾರ ಮಾಡುವುದರ ಮೊದಲು ಸಾಮಾಜಿಕ ಒಳಿತನ್ನು ನೋಡುವುದು ಉತ್ತಮ. ಜನರನ್ನೇ ಕೇಳಿ ಅವರಿಗೆ ಎಂತಹ ರಿಯಾಲಿಟಿ ಶೋಗಳ ಅವಶ್ಯಕತೆಯಿದೆ ಎಂದು ತಿಳಿದು ಮಾಡಿದರೆ, ಅವರು ಯಶ ಸಾಧಿಸಬಹುದು. ರಿಯಾಲಿಟಿ ಶೋವಿನ ಹೆಸರು ಕೇಳಿದೊಡನೆ ಓಡುವ ಬದಲು ಉತ್ತಮತೆಯನ್ನು ಸ್ವಾಗತಿಸೋಣ.
ಆದರೆ ಈ ಸಂದರ್ಭದಲ್ಲಿ ಮೊದಲೇ ತಿಳಿಸಿದಂತಹ ಮಾನ-ಮಯರ್ಾದೆ ಎಲ್ಲವನ್ನೂ ಬಿಟ್ಟ ರಾಖಿ ಸಾವಂತ್, ರಾಹುಲ್ ಮಹಾಜನ್ ಅಂತವರನ್ನು ದೊಡ್ಡವರನ್ನಾಗಿಸುವ ರಿಯಾಲಿಟಿ ಶೋಗಳನ್ನು ವಿರೋಧಿಸೋಣ. ವಿದ್ಯಾಥರ್ಿಗಳು, ಕುಟುಂಬದವರು ಪ್ರತಿಯೊಬ್ಬರು ತಮ್ಮ ದೂರುಗಳನ್ನು ನೀಡಬಹುದು. ನಿದರ್ೇಶಕರು, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಇವರಿಗೆ ಪತ್ರದ ಮುಖೇನ ನಮ್ಮ ದೂರುಗಳನ್ನು ನೀಡಬಹುದು, ಇಲ್ಲವೇ ಅಂತಜರ್ಾಕದ ಮೂಲಕ ಅಭಿಯಾನ ಪ್ರಾರಂಭಿಸಬಹುದು. ಅದರೊಡನೆ ಮಹಿಳಾ ಮತ್ತು ಮಕ್ಕಳ ಹಕ್ಕು ಪಾಲನಾ ಮಂಡಳಿಗೂ ದೂರು ಸಲ್ಲಿಸಬಹುದು.
ಹಾಗಾದರೆ ಇನ್ನು ಸುಮ್ಮನೇ ಕುಳಿತುಕೊಳ್ಳಬೇಕೆ. ನಮಗೆ ಬೇಡವಾದಂತಹ ಕಾರ್ಯಕ್ರಮಗಳ ವಿರುದ್ಧ ಇಂದೇ ಅಭಿಯಾನ ಪ್ರಾರಂಭಿಸೋಣ. ಕೂಡಲೆ ಯಶಸ್ಸು ನಮ್ಮದಾಗದಿದ್ದರೂ ಮುಂದಿನ ದಿನಗಳಲ್ಲಿ ಯಶ ಎನ್ನುವುದು ನಮ್ಮ ಎದುರಿಗೆ ಬರಬಹುದು. ಪ್ರಯತ್ನ ನಮ್ಮದಾಗಲಿ, ಪಲಿತಾಂಶಕ್ಕಾಗಿ ಕಾಯೋಣ. ರಿಯಾಲಿಟಿ ಶೋ ಉಪ್ಪಿನ ಕಾಯಿ ಆಗಲೇ ಹೊರತು, ಊಟವಾಗುವುದು ಬೇಡ.

ಮೊಗ್ಗಿನ ಮನಸ್ಸು ರಾಷ್ಟ್ರೀಯ ಚಿಂತನೆಯಿಂದ ದೂರವಾಗುತ್ತಿದ್ದೇವೆಯೇ?

ಸಮಸ್ತ ವಿಶ್ವವೇ ಭಾರತದ ಬೆಳವಣಿಗೆಯತ್ತ ದೊಡ್ಡ ಕಣ್ಣು ಬಿಟ್ಟುಕೊಂಡು ಗಮನಿಸುತ್ತಿದೆ. ಇದಕ್ಕೆ ಬಹು ದೊಡ್ಡ ಕಾರಣ ನಮ್ಮ ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಜನ ನನ್ನಂತಹ ಯುವಕರು. ಆದರೆ ಚೀನಾ ಹಾಗೂ ಅಮೇರಿಕಾದಂತಹ ಮುಂದುವರಿದ ದೇಶಗಳಲ್ಲಿ ಭಾರತದ ತದ್ವಿರುದ್ಧ ಪರಿಸ್ಥಿತಿ ಇದೆ. ಹಾಗಾದರೆ ಅರ್ಧದಷ್ಟು ಯುವಕರಾದ ನಾನು, ನೀವು ಜಗತ್ತು ಹಾಗೂ ದೇಶದ ಅವಶ್ಯಕತೆ ಮತ್ತು ನಿರೀಕ್ಷೆಗೆ ಸ್ಪಂದಿಸುತ್ತಿದ್ದೇವೆಯೇ? ಈ ಮೊಗ್ಗಿನ ಮನಸ್ಸು ದೇಶಕ್ಕಾಗಿ ಅರಳಬೇಕಲ್ಲವೇ?
ಜಾಗತೀಕರಣ, ಸ್ಪಧರ್ೆ ಹಾಗೂ ತಂತ್ರಜ್ಞಾನದ ನೆಪವೊಡ್ಡಿ ಎಲ್ಲ ಜವಬ್ದಾರಿಗಳಿಂದ ನಾನು ವಿಮುಖನಾಗುತ್ತಿದ್ದೇನೆ ಅನಿಸುತ್ತೆ. ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ಇಂದು ಒಂದು ವಾರದಲ್ಲಿ ಮಾಡಬೇಕಾದ ಕೆಲಸವನ್ನು ನಾನು ಒಂದು ದಿನದಲ್ಲಿ ಪೂರೈಸುತ್ತಿದ್ದೇನೆ. ಆದರೂ ಸಹ ನನಗೆ ನನ್ನ ಸಮಾಜ, ದೇಶ ಹಾಗೂ ಪರಿಸರದ ವಿಷಯ ಬಂದಾಗ ಸಕತ್ 'ಬ್ಯೂಸಿ'ಯಾಗಿಬಿಡುತ್ತೇನೆ. ನನ್ನ ಕಾರ್ಯಕ್ರಮ ಪಟ್ಟಿ ಹೇಗಾದರೂ ಬೆಳೆದುಬಿಡುತ್ತದೆ.
ಇಂದು ಮಧು ಕೋಡಾರಂತಹ ಮಾಜಿ ಮುಖ್ಯಮಂತ್ರಿ ಬಳಿ ಬೇನಾಮಿ 5 ಸಾವಿರ ಕೋಟಿ ಆಸ್ತಿ ಪಾಸ್ತಿ ದೊರಕಿದಾಗ ನಾನು ಪಡೆಯುವ 4-5 ಸಾವಿರ ಸಂಬಳದ ಬಗ್ಗೆಯೆ ಹಗಲಿರುಳು ಆಲೋಚಿಸುತ್ತಾ ಕುಳಿತುಬಿಡುತ್ತೇನೆ. ಅದೇ ಡಿ.ರಾಜಾರಂತಹ ಸಚಿವರು 70 ಸಾವಿರ ಕೋಟಿ ಬೃಹತ್ ಹಗರಣ ಸೃಷ್ಟಿಸಿದರೂ ಅದೇ ಕ್ಷೇತ್ರಕ್ಕೆ ಸಂಬಂಧಿಸಿದ ಐಟಿ-ಬಿಟಿ ಹಾಗೂ ಇನ್ನಿತರ 70 ಸಾವಿರ ಸಂಬಳ ಪಡೆಯಲು ಉತ್ಸುಕಿಸುವ ನನ್ನಂತಹ ಯುವ ಮನಗಳು ಯಾವುದೇ ಪಬ್, ಕ್ಲಬ್ನಲ್ಲಿ ಅಥವಾ ಮನೆಯಲ್ಲೇ ಮಜಾ ಹೊಡೆಯುತ್ತಿರುತ್ತವೆ. ಕೋಡಾ ಅವರ ಆಸ್ತಿ ಜಾರ್ಖಂಡ್ ರಾಜ್ಯದ ಅರ್ಧ ಬಜೆಟ್ ಅನ್ನು ಬರಿಸಬಹುದಾಗಿದ್ದರೆ, ಡಿ.ರಾಜಾ ಅವರ 2-ಜಿ ದೂರ ಸಂಪರ್ಕ ಹಗರಣದ ಹಣದಿಂದ ಕನರ್ಾಟಕದಲ್ಲಿ 20 ಸಾವಿರ ಕೋಟಿ ಉಳಿತಾಯ ಬಜೆಟ್ನ್ನು ಯಡಿಯೂರಪ್ಪ ಮಂಡಿಸಬಹುದು. ಕರಾವಳಿ ಹಾಗೂ ಉತ್ತರ ಕನರ್ಾಟಕದ ಜನತೆಯ ಅಸೆ, ಆಕಾಂಕ್ಷೆಗಳು ಪ್ರವಾದಲ್ಲಿ ತೇಲಿ ಹೋಗುತ್ತಿದ್ದರೆ, ಕನರ್ಾಟಕ ಸರಕಾರ ರೆಸಾಟರ್್ನಲ್ಲಿ ಮೋಜು, ಮಸ್ತಿಯ ನಶೆಯಲ್ಲಿ ಜಾಲಿ ಹೊಡೆಯುತ್ತಿತ್ತು. ಆಗಲೂ ನನ್ನಂತಹ ಮೊಗ್ಗಿನ ಮನಸ್ಸು ಅರಳುವ ಕೆಲಸ ಮಾಡಲೇ ಇಲ್ಲ.
ಚೆನ್ನೈನಲ್ಲಿ 2 ವರ್ಷದ ಹಿಂದೆ ಕೆಲ ಆಸಕ್ತ ವಿದ್ಯಾಥರ್ಿಗಳ ಗುಂಪು ಯಾವುದೇ ರಾಜಕೀಯ ಪ್ರೇರಿತವಿಲ್ಲದೇ ರಾಜಕೀಯಕ್ಕೆ ಧುಮುಕಿತು. ಪ್ರಜ್ಞಾವಂತ ಜನಪ್ರತಿನಿಧಿಗಳ ಆಯ್ಕೆಗಾಗಿ, ಪ್ರತಿಯೊಂದು ಕ್ಷೇತ್ರಕ್ಕೂ ಸಂಬಂಧಿಸಿದ ಪರಿಣಿತ ಯುವಕರನ್ನೇ ಚುನಾವಣೆಗೆ ನಿಲ್ಲಿಸುವ ಪ್ರಕ್ರೀಯೆಯು ನಡೆಯಿತು. ಆದರೆ ಕೆಲವೇ ದಿನಗಳಲ್ಲಿ, ಎಷ್ಟು ಹುರುಪಿನಿಂದ ಈ ಸಂಘಟನೆ ಹುಟುಕೊಂಡಿತ್ತೋ ಅದರ 2 ಪಟ್ಟು ಬೇಸರದಿಂದ ಅಖಾಡದಿಂದ ನಿರ್ಗಮಿಸಿತು.
ಇದೇನೋ ವಿಶೇಷ ಪ್ರಕರಣವೆಂದು ಮರೆಯಬಹುದು. ಆದರೆ ಇದನ್ನು ಎಷ್ಟು ಸಾರಿ ಮರೆಯೋಣ. ಏಕೆಂದರೆ ನಮ್ಮ ಜನಪ್ರತಿನಿಧಿಗಳು ಮರೆಯಲು ಅವಕಾಶವನ್ನೇ ನೀಡಲ್ಲ. ಪ್ರತಿಬಾರಿಯೂ ಮಾದ್ಯಮಗಳು ಒಂದೆರಡು ದಿನ ಬೊಬ್ಬೆ ಹೊಡೆದುಕೊಳ್ಳುತ್ತವೆ, ನಾಣೂ ಕೂಡ ಸಿನೆಮಾ ನೊಡಿದ ಶೈಲಿಯಲ್ಲಿ ನೋಡಿ ಪುಕ್ಕಟೆ ಮನರಂಜನೆ ಪಡೆಯುತ್ತೇನೆ. ಆದರೆ ಮರುದಿನ ನನ್ನ ಎಲ್ಲ ಬೈಗುಳ ಮಾದ್ಯಮ ಹಾಗೂ ಜನ ಪ್ರತಿನಿಧಿಗಳ ಮೇಲೆ ತಿರುಗತ್ತದೆ, ಏಕೆಂದರೆ ಇಂತಹ ಅನೇಕ ಲಫಡಾಗಳಿಂದ ನನ್ನ ಸಂಬಳಕ್ಕೆ ಕತ್ತರಿ ಬಂದಿರುತ್ತದೆ. ಇಲ್ಲದಿದ್ದರೆ ಆ ಬೈಗುಳ ಕೂಡ ಇಲ್ಲ.
ನಮ್ಮ ದೇಶ ಸರಿಯಿಲ್ಲ, ಇಲ್ಲ ಆ ಪ್ರಾಬ್ಲಂ, ಇದು, ಅದು ಅಂತ ನಾನು ಅಲ್ಲಿ ಇಲ್ಲಿ ಹರಟೆ ಹೊಡೆಯತ್ತೇನೆ. ಆದರೆ ನನ್ನ ದೇಶ ಉದ್ಧಾರಕ್ಕೆ ನಾನು ಎಂತಹ ಪ್ರತಿನಿಧಿಗಳನ್ನು ಕಳುಹಿಸಿದ್ದೇನೆ, ಅಥವಾ ಆತ ನನ್ನ ನೈಜ ಪ್ರತಿನಿಧಿಯೇ. ಏಕೆಂದರೆ ನಾನು ಆತನಿಗೆ ಮತವನ್ನೇ ನೀಡಿಲ್ಲ. ಏಕೆಂದರೆ ಮತದಾನದ ದಿನ ನಾನು ಪರೀಕ್ಷೆ ಬರೆಯುತ್ತಿದ್ದೆ. ಹಾಗೆಯೇ ನನ್ನಂತಹ ಎಷ್ಟೋ ಯುವ ಹೃದಯಗಳು ಅವಕಾಶ ಮಿಸ್ ಮಾಡಿಕೊಂಡಿರಬಹುದು ಅಥವಾ ನೆಪ ಸೃಷ್ಟಿಮಾಡಿಕೊಂಡಿರಬಹುದು.
ಇಂತಹುದರ ಪರಿಣಾಮವೇ ನಿವೃತ್ತಿ ವಯಸ್ಸು 60ಕ್ಕೆ ಏರುತ್ತದೆ. ಅದರಲ್ಲೂ ವಿವಿ ಉಪನ್ಯಾಸಕರಿಗೆ ಮತ್ತೆರಡು ವರ್ಷ ಹೆಚ್ಚಿನ ಉಪನ್ಯಾಸ ಸೇವೆ. ಏಕೆಂದರೆ ನನ್ನಂತಹ ಯುವಕರು ರಾಜಕೀಯ ಹಾಗೂ ಆಡಳಿತಾತ್ಮಕ ವಿಷಯಗಳಿಂದ ದೂರವಾದಾಗ ಇದಕ್ಕಿಂತ ವಿಶೇಷವಾದದ್ದನ್ನು ನಿರೀಕ್ಷಿಸುವುದು ತಪ್ಪಾದೀತು. ಅದರಲ್ಲೂ ರಾಜಕೀಯಕ್ಕೆ ನಿವೃತ್ತಿಯೇ ಇಲ್ಲದಿರುವುದರಿಂದ ಅವರು ತಮ್ಮ ಅವಶ್ಯಕತೆಗೆ ಅನುಗುಣವಾಗಿಯೇ ಕ್ರಮ ಜರುಗಿಸುತ್ತಾರೆ.
ಹಾಗಾದರೆ ಇಂದಿನ ರೋಗ ಪೀಡಿತ ರಾಜಕೀಯ ವ್ಯವಸ್ಥೆಯನ್ನು ಬದಲಿಸುವ, ಶುಶ್ರೂಷೆ ನೀಡುವ ಸೂಕ್ತ ಸಂಘಟನಾ ಚಾತುರ್ಯ ಹಾಗೂ ವೈದ್ಯ 50 ಕೋಟಿ ಮೊಗ್ಗಿನ ಮನಸ್ಸಿನಲ್ಲಿ ಹಾಗೂ ನನ್ನಲ್ಲಿ ಮಾಸಿ ಹೋಗಿದೆಯೆ.
ನಾವು ಇಂದು ಕಾಲೇಜು ಕ್ಯಾಂಪಸ್ನಲ್ಲಿ ರಾಜಕೀಯ ಪ್ರೇರಿತ ಹಲವಾರು ಸಂಘಟನೆಗಳನ್ನು ಕಾಣುತ್ತೇವೆ. ಆ ಸಂಘಟನೆಯಲ್ಲಿ ನಾನು ಗೊತ್ತಿಲ್ಲದೆಯೂ ಪ್ರೇರಕನಾಗಿರಬಹುದು. ಇತ್ತೀಚೆಗೆ ನಾನು ಓದುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಒಂದು ಪ್ರತಿಭಟನೆ ಜರುಗಿತು. ವಿಷಯ ಏನೆಂದರೆ ಒಂದು ಅನಧೀಕೃತ ಖಾಸಗಿ ವಿವಿಯಲ್ಲಿ ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ನಕಲು ಹೊಡೆಯುತ್ತಿದ್ದಾರೆ ಎಂದು ನನ್ನ ಕ್ಯಾಂಪಸ್ನಲ್ಲಿ ಪ್ರತಿಭಟನೆ. ಎಲ್ಲ ತರಗತಿಗಳಿಗೂ ಬಂದು ಬಲವಂತವಾಗಿ ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ಯಲಾಯಿತು. ಆದರೆ ನನ್ನ ಮನದಲ್ಲಿ ಆಲೋಚನೆಯೊಂದು ಬಂದು ಹೋಯಿತು. ನಾನು ಇಂದು ನಡೆಸುತ್ತಿರುವ ಒಂದು ದಿನದ ಪ್ರತಿಭಟನೆಯಿಂದ ನನ್ನ ಸಂಸ್ಥೆಯ ಎಲ್ಲ ನೌಕರರಿಗೆ ನೀಡುವ 8 ಲಕ್ಷಕ್ಕಿಂತಲೂ ಮಿಕ್ಕ ಹಣ ವ್ಯರ್ಥವಾಗುತ್ತಿತ್ತು. ಅವರೆಲ್ಲರೂ ಯಾವುದೇ ಕೆಲಸವಿಲ್ಲದಿದ್ದರೂ ಸಂಬಳ ಎಣಿಸುತ್ತಿದ್ದರು. ಅಷ್ಟರಲ್ಲಿ ಮಾದ್ಯಮ ಪ್ರತಿನಿಧಿಗಳು ಬಂದು ಫೋಟೊ ಕ್ಲಿಕ್ಕಾಯಿಸಿದರು. ಅಲ್ಲಿಗೆ ಎಲ್ಲ ರೋಷ, ಪ್ರತಿಭಟನೆಗೆ ಇತಿಶ್ರೀ. ಹಾಗಾದರೆ ಮಾಧ್ಯಮದಲ್ಲಿ ಭಾವಚಿತ್ರ ಛಾಪಿಸಿಕೊಳ್ಳಲು ಇಷ್ಟೆಲ್ಲಾ ಸರ್ಕಸ್ ಮಾಡಬೇಕಾ? ಅಥವಾ ಜನಸಾಮಾನ್ಯರ ಬೆವರಿನ ತೆರಿಗೆ ಹಣದ 8 ಲಕ್ಷ ರೂ ಹಣ ಪೋಲು ಮಾಡಬೇಕಾ?
ಆದರೂ ಆಗಾಗ ಮನದಲ್ಲಿ ಏನೋ ಗೊಂದಲ. ನನ್ನಲ್ಲೂ ಪ್ರತಿಭಟನಾತ್ಮಕ ಗುಣವಿದೆ ಎಂಬ ಖುಷಿ, ಅದರ ಜೊತೆಯಲ್ಲೇ ಅವುಗಳಿಂದ ನಾನು ಸಾಧಿಸಿದ್ದೇನೆಂಬ ಹತಾಶ ಭಾವನೆ.
ಕಳೆದ 60 ವರ್ಷದಿಂದ ನಾವು ನಡೆಸುತ್ತಿರುವ ಶೈಕ್ಷಣಿಕ ಆಂದೋಲನದಿಂದ ಯಾವುದಾದರೂ ಬದಲಾವಣೆ ನಮ್ಮಲ್ಲಿ ಕಾಣುತ್ತಿದೆಯೇ? ನನ್ನ ಅಜ್ಜ ಓದಿದ್ದರೇ, ಅವರು ಓದಿದ್ದನ್ನೇ ನನ್ನ ಅಪ್ಪ ಓದಿದರು. ಅದನ್ನೇ ನಾನು ಅರೆ ಮನದಿಂದ ಓದಿ ಮುಗಿಸುವ ಹಂತದಲ್ಲಿದ್ದೇನೆ. ಮುಂದೆ ನನ್ನ ಮಗ, ಮಗಳು ಕೂಡ ಇದನ್ನೆ ಓದುತ್ತಾರೆ. ಏಕೆಂದರೆ ನನಗೆ ಪ್ರಸಕ್ತ ಶಿಕ್ಷಣ ಇಷ್ಟವಿಲ್ಲದಿದ್ದರೂ ಯಾವುದೋ ಒತ್ತಡ ಹಾಗೂ ಭಯಕ್ಕೆ ಅಂಜಿ ನನ್ನ ಭಾವನೆಗಳನ್ನು ಅದುಮಿಟ್ಟುಕೊಳ್ಳುತ್ತೇನೆ. ಹೀಗಾದಾಗ ಈ ವ್ಯವಸ್ಥೆ ಹೇಗೆ ಬದಲಾಗಲು ಸಾಧ್ಯ?
ಕೇವಲ ಕಲ್ಲು ಹೊಡೆದು, ಬಸ್ ಸುಟ್ಟು ಸುಮ್ಮನಾದರೆ ಯಾವುದೇ ಗೊಂದಲಗಳಿಗೂ ಪರಿಹಾರ ದೊರಕಲಾರವು. ನಮ್ಮ ಪ್ರತಿಕ್ರಿಯೆಗಳು ರಚನಾತ್ಮಕವಾಗಿರಬೇಕು. ಹೊಸ ಮಾದರಿ ಹಾಗೂ ವ್ಯವಸ್ಥೆಗೆ ಕಾಯುವ ಬದಲು ನಾವೇ ಮಾದರಿಯಾಗಿ ಮಾರ್ಪಟ್ಟರೆ ನಮ್ಮ ಇಷ್ಟಗಳು ನೆರವೇರುತ್ತವೆ. ನನ್ನ ಮಗ ನಾನು ಎದುರಿಸಿದ ಗೊಂದಲ ಎದುರಿಸಲಾರ. ಚೆನ್ನೈ ವಿದ್ಯಾಥರ್ಿಗಳು ಮಾಡಿದ ಆರಂಭ ಶೂರತ್ವ ಕೆಲಸ ನಿರಂತರವಾದರೆ, ಪ್ರಸಕ್ತ ಶಿಕ್ಷಣ ವ್ಯವಸ್ಥೆಗೆ ನನ್ನ, ನಿಮ್ಮಿಂದಲೇ ಪರಿಹಾರ ದೊರಕಿದರೇ ಇದಕ್ಕಿಂತ ದೊಡ್ಡ ನಿರೀಕ್ಷೆ ನಮ್ಮಲ್ಲಿ ಉಳಿಯಲು ಅಸಾಧ್ಯ.
ನಮ್ಮ ಮೊಗ್ಗಿನ ಮನಸ್ಸಿಗೆ ಸ್ವಲ್ಪ ಛಾಟಿಯೇಟು ನೀಡಿ ಮಾಗಿಸುವ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದೆರಗುತ್ತದೆ. ಇಲ್ಲದಿದ್ದರೆ 20-30 ವರ್ಷದ ಯುವ ಹಕ್ಕಿಗಳಿಗೆ ಬೇಕಾದ ಶಿಕ್ಷಣ ಹಾಗೂ ಆತನ ಸಾಮಾಜಿಕ ಚಟುವಟಿಕೆಯನ್ನು 60 ದಾಟಿದ ನನ್ನ ಅಜ್ಜಂದಿರು ನಿರ್ಧರಿಸುತ್ತಲೇ ಇರುತ್ತಾರೆ. ಅವರು ನನಗಿಂತ ಹಲವಷ್ಟು ಅನುಭವಸ್ಥರಾಗಿರಬಹುದು, ಆದರೆ ಮೊಗ್ಗಿನ ಮನಸ್ಸಿನ ಆಕಾಂಕ್ಷೆಯನ್ನು ತಿಳಿಯಲಾರರು. ಮೊಗ್ಗಿನ ಮನಸ್ಸು ಅರಳಿ ಹೂವಾಗಲಿ, ಅದಕ್ಕೆ ಮಾಗಲು ಅವಕಾಶ ನೀಡಿ.